Labels

Search :

Wednesday, February 14, 2024

ಶ್ರೀ ಲಕ್ಷ್ಮೀ ಸಹಸ್ರನಾಮ ಸ್ತೋತ್ರಂ

 ಶ್ರೀ ಲಕ್ಷ್ಮೀ ಸಹಸ್ರನಾಮ ಸ್ತೋತ್ರಂ || Bombay Sisters

ನಾಮ್ನಾಂ ಸಾಷ್ಟಸಹಸ್ರಂಚ ಬ್ರೂಹಿ ಗಾರ್ಗ್ಯ ಮಹಾಮತೇ ।

ಮಹಾಲಕ್ಷ್ಮ್ಯಾ ಮಹಾದೇವ್ಯಾ ಭುಕ್ತಿಮುಕ್ತ್ಯರ್ಥಸಿದ್ಧಯೇ ॥ 1 ॥


ಗಾರ್ಗ್ಯ ಉವಾಚ

ಸನತ್ಕುಮಾರಮಾಸೀನಂ ದ್ವಾದಶಾದಿತ್ಯಸನ್ನಿಭಮ್ ।

ಅಪೃಚ್ಛನ್ಯೋಗಿನೋ ಭಕ್ತ್ಯಾ ಯೋಗಿನಾಮರ್ಥಸಿದ್ಧಯೇ ॥ 2 ॥


ಸರ್ವಲೌಕಿಕಕರ್ಮಭ್ಯೋ ವಿಮುಕ್ತಾನಾಂ ಹಿತಾಯ ವೈ ।

ಭುಕ್ತಿಮುಕ್ತಿಪ್ರದಂ ಜಪ್ಯಮನುಬ್ರೂಹಿ ದಯಾನಿಧೇ ॥ 3 ॥


ಸನತ್ಕುಮಾರ ಭಗವನ್ಸರ್ವಜ್ಞೋಽಸಿ ವಿಶೇಷತಃ ।

ಆಸ್ತಿಕ್ಯಸಿದ್ಧಯೇ ನೄಣಾಂ ಕ್ಷಿಪ್ರಧರ್ಮಾರ್ಥಸಾಧನಮ್ ॥ 4 ॥


ಖಿದ್ಯಂತಿ ಮಾನವಾಸ್ಸರ್ವೇ ಧನಾಭಾವೇನ ಕೇವಲಮ್ ।

ಸಿದ್ಧ್ಯಂತಿ ಧನಿನೋಽನ್ಯಸ್ಯ ನೈವ ಧರ್ಮಾರ್ಥಕಾಮನಾಃ ॥ 5 ॥


ದಾರಿದ್ರ್ಯಧ್ವಂಸಿನೀ ನಾಮ ಕೇನ ವಿದ್ಯಾ ಪ್ರಕೀರ್ತಿತಾ ।

ಕೇನ ವಾ ಬ್ರಹ್ಮವಿದ್ಯಾಽಪಿ ಕೇನ ಮೃತ್ಯುವಿನಾಶಿನೀ ॥ 6 ॥


ಸರ್ವಾಸಾಂ ಸಾರಭೂತೈಕಾ ವಿದ್ಯಾನಾಂ ಕೇನ ಕೀರ್ತಿತಾ ।

ಪ್ರತ್ಯಕ್ಷಸಿದ್ಧಿದಾ ಬ್ರಹ್ಮನ್ ತಾಮಾಚಕ್ಷ್ವ ದಯಾನಿಧೇ ॥ 7 ॥


ಸನತ್ಕುಮಾರ ಉವಾಚ

ಸಾಧು ಪೃಷ್ಟಂ ಮಹಾಭಾಗಾಸ್ಸರ್ವಲೋಕಹಿತೈಷಿಣಃ ।

ಮಹತಾಮೇಷ ಧರ್ಮಶ್ಚ ನಾನ್ಯೇಷಾಮಿತಿ ಮೇ ಮತಿಃ ॥ 8 ॥


ಬ್ರಹ್ಮವಿಷ್ಣುಮಹಾದೇವಮಹೇಂದ್ರಾದಿಮಹಾತ್ಮಭಿಃ ।

ಸಂಪ್ರೋಕ್ತಂ ಕಥಯಾಮ್ಯದ್ಯ ಲಕ್ಷ್ಮೀನಾಮಸಹಸ್ರಕಮ್ ॥ 9 ॥


ಯಸ್ಯೋಚ್ಚಾರಣಮಾತ್ರೇಣ ದಾರಿದ್ರ್ಯಾನ್ಮುಚ್ಯತೇ ನರಃ ।

ಕಿಂ ಪುನಸ್ತಜ್ಜಪಾಜ್ಜಾಪೀ ಸರ್ವೇಷ್ಟಾರ್ಥಾನವಾಪ್ನುಯಾತ್ ॥ 10 ॥


ಅಸ್ಯ ಶ್ರೀಲಕ್ಷ್ಮೀದಿವ್ಯಸಹಸ್ರನಾಮಸ್ತೋತ್ರಮಹಾಮಂತ್ರಸ್ಯ ಆನಂದಕರ್ದಮಚಿಕ್ಲೀತೇಂದಿರಾಸುತಾದಯೋ ಮಹಾತ್ಮಾನೋ ಮಹರ್ಷಯಃ ಅನುಷ್ಟುಪ್ಛಂದಃ ವಿಷ್ಣುಮಾಯಾ ಶಕ್ತಿಃ ಮಹಾಲಕ್ಷ್ಮೀಃ ಪರಾದೇವತಾ ಶ್ರೀಮಹಾಲಕ್ಷ್ಮೀಪ್ರಸಾದದ್ವಾರಾ ಸರ್ವೇಷ್ಟಾರ್ಥಸಿದ್ಧ್ಯರ್ಥೇ ಜಪೇ ವಿನಿಯೋಗಃ ।


ಧ್ಯಾನಂ

ಪದ್ಮನಾಭಪ್ರಿಯಾಂ ದೇವೀಂ ಪದ್ಮಾಕ್ಷೀಂ ಪದ್ಮವಾಸಿನೀಮ್ ।

ಪದ್ಮವಕ್ತ್ರಾಂ ಪದ್ಮಹಸ್ತಾಂ ವಂದೇ ಪದ್ಮಾಮಹರ್ನಿಶಮ್ ॥ 1 ॥


ಪೂರ್ಣೇಂದುವದನಾಂ ದಿವ್ಯರತ್ನಾಭರಣಭೂಷಿತಾಮ್ ।

ವರದಾಭಯಹಸ್ತಾಢ್ಯಾಂ ಧ್ಯಾಯೇಚ್ಚಂದ್ರಸಹೋದರೀಮ್ ॥ 2 ॥


ಇಚ್ಛಾರೂಪಾಂ ಭಗವತಸ್ಸಚ್ಚಿದಾನಂದರೂಪಿಣೀಮ್ ।

ಸರ್ವಜ್ಞಾಂ ಸರ್ವಜನನೀಂ ವಿಷ್ಣುವಕ್ಷಸ್ಸ್ಥಲಾಲಯಾಮ್ ।

ದಯಾಲುಮನಿಶಂ ಧ್ಯಾಯೇತ್ಸುಖಸಿದ್ಧಿಸ್ವರೂಪಿಣೀಮ್ ॥ 3 ॥


ಸ್ತೋತ್ರಂ

ನಿತ್ಯಾಗತಾನಂತನಿತ್ಯಾ ನಂದಿನೀ ಜನರಂಜನೀ ।

ನಿತ್ಯಪ್ರಕಾಶಿನೀ ಚೈವ ಸ್ವಪ್ರಕಾಶಸ್ವರೂಪಿಣೀ ॥ 1 ॥


ಮಹಾಲಕ್ಷ್ಮೀರ್ಮಹಾಕಾಲೀ ಮಹಾಕನ್ಯಾ ಸರಸ್ವತೀ ।

ಭೋಗವೈಭವಸಂಧಾತ್ರೀ ಭಕ್ತಾನುಗ್ರಹಕಾರಿಣೀ ॥ 2 ॥


ಈಶಾವಾಸ್ಯಾ ಮಹಾಮಾಯಾ ಮಹಾದೇವೀ ಮಹೇಶ್ವರೀ ।

ಹೃಲ್ಲೇಖಾ ಪರಮಾ ಶಕ್ತಿರ್ಮಾತೃಕಾಬೀಜರೂಪಿಣೀ ॥ 3 ॥


ನಿತ್ಯಾನಂದಾ ನಿತ್ಯಬೋಧಾ ನಾದಿನೀ ಜನಮೋದಿನೀ ।

ಸತ್ಯಪ್ರತ್ಯಯನೀ ಚೈವ ಸ್ವಪ್ರಕಾಶಾತ್ಮರೂಪಿಣೀ ॥ 4 ॥


ತ್ರಿಪುರಾ ಭೈರವೀ ವಿದ್ಯಾ ಹಂಸಾ ವಾಗೀಶ್ವರೀ ಶಿವಾ ।

ವಾಗ್ದೇವೀ ಚ ಮಹಾರಾತ್ರಿಃ ಕಾಲರಾತ್ರಿಸ್ತ್ರಿಲೋಚನಾ ॥ 5 ॥


ಭದ್ರಕಾಳೀ ಕರಾಳೀ ಚ ಮಹಾಕಾಳೀ ತಿಲೋತ್ತಮಾ ।

ಕಾಳೀ ಕರಾಳವಕ್ತ್ರಾಂತಾ ಕಾಮಾಕ್ಷೀ ಕಾಮದಾ ಶುಭಾ ॥ 6 ॥


ಚಂಡಿಕಾ ಚಂಡರೂಪೇಶಾ ಚಾಮುಂಡಾ ಚಕ್ರಧಾರಿಣೀ ।

ತ್ರೈಲೋಕ್ಯಜಯಿನೀ ದೇವೀ ತ್ರೈಲೋಕ್ಯವಿಜಯೋತ್ತಮಾ ॥ 7 ॥


ಸಿದ್ಧಲಕ್ಷ್ಮೀಃ ಕ್ರಿಯಾಲಕ್ಷ್ಮೀರ್ಮೋಕ್ಷಲಕ್ಷ್ಮೀಃ ಪ್ರಸಾದಿನೀ ।

ಉಮಾ ಭಗವತೀ ದುರ್ಗಾ ಚಾಂದ್ರೀ ದಾಕ್ಷಾಯಣೀ ಶಿವಾ ॥ 8 ॥


ಪ್ರತ್ಯಂಗಿರಾ ಧರಾವೇಲಾ ಲೋಕಮಾತಾ ಹರಿಪ್ರಿಯಾ ।

ಪಾರ್ವತೀ ಪರಮಾ ದೇವೀ ಬ್ರಹ್ಮವಿದ್ಯಾಪ್ರದಾಯಿನೀ ॥ 9 ॥


ಅರೂಪಾ ಬಹುರೂಪಾ ಚ ವಿರೂಪಾ ವಿಶ್ವರೂಪಿಣೀ ।

ಪಂಚಭೂತಾತ್ಮಿಕಾ ವಾಣೀ ಪಂಚಭೂತಾತ್ಮಿಕಾ ಪರಾ ॥ 10 ॥


ಕಾಳೀ ಮಾ ಪಂಚಿಕಾ ವಾಗ್ಮೀ ಹವಿಃಪ್ರತ್ಯಧಿದೇವತಾ ।

ದೇವಮಾತಾ ಸುರೇಶಾನಾ ದೇವಗರ್ಭಾಽಂಬಿಕಾ ಧೃತಿಃ ॥ 11 ॥


ಸಂಖ್ಯಾ ಜಾತಿಃ ಕ್ರಿಯಾಶಕ್ತಿಃ ಪ್ರಕೃತಿರ್ಮೋಹಿನೀ ಮಹೀ ।

ಯಜ್ಞವಿದ್ಯಾ ಮಹಾವಿದ್ಯಾ ಗುಹ್ಯವಿದ್ಯಾ ವಿಭಾವರೀ ॥ 12 ॥


ಜ್ಯೋತಿಷ್ಮತೀ ಮಹಾಮಾತಾ ಸರ್ವಮಂತ್ರಫಲಪ್ರದಾ ।

ದಾರಿದ್ರ್ಯಧ್ವಂಸಿನೀ ದೇವೀ ಹೃದಯಗ್ರಂಥಿಭೇದಿನೀ ॥ 13 ॥


ಸಹಸ್ರಾದಿತ್ಯಸಂಕಾಶಾ ಚಂದ್ರಿಕಾ ಚಂದ್ರರೂಪಿಣೀ ।

ಗಾಯತ್ರೀ ಸೋಮಸಂಭೂತಿಸ್ಸಾವಿತ್ರೀ ಪ್ರಣವಾತ್ಮಿಕಾ ॥ 14 ॥


ಶಾಂಕರೀ ವೈಷ್ಣವೀ ಬ್ರಾಹ್ಮೀ ಸರ್ವದೇವನಮಸ್ಕೃತಾ ।

ಸೇವ್ಯದುರ್ಗಾ ಕುಬೇರಾಕ್ಷೀ ಕರವೀರನಿವಾಸಿನೀ ॥ 15 ॥


ಜಯಾ ಚ ವಿಜಯಾ ಚೈವ ಜಯಂತೀ ಚಾಽಪರಾಜಿತಾ ।

ಕುಬ್ಜಿಕಾ ಕಾಲಿಕಾ ಶಾಸ್ತ್ರೀ ವೀಣಾಪುಸ್ತಕಧಾರಿಣೀ ॥ 16 ॥


ಸರ್ವಜ್ಞಶಕ್ತಿಶ್ಶ್ರೀಶಕ್ತಿರ್ಬ್ರಹ್ಮವಿಷ್ಣುಶಿವಾತ್ಮಿಕಾ ।

ಇಡಾಪಿಂಗಲಿಕಾಮಧ್ಯಮೃಣಾಲೀತಂತುರೂಪಿಣೀ ॥ 17 ॥


ಯಜ್ಞೇಶಾನೀ ಪ್ರಥಾ ದೀಕ್ಷಾ ದಕ್ಷಿಣಾ ಸರ್ವಮೋಹಿನೀ ।

ಅಷ್ಟಾಂಗಯೋಗಿನೀ ದೇವೀ ನಿರ್ಬೀಜಧ್ಯಾನಗೋಚರಾ ॥ 18 ॥


ಸರ್ವತೀರ್ಥಸ್ಥಿತಾ ಶುದ್ಧಾ ಸರ್ವಪರ್ವತವಾಸಿನೀ ।

ವೇದಶಾಸ್ತ್ರಪ್ರಭಾ ದೇವೀ ಷಡಂಗಾದಿಪದಕ್ರಮಾ ॥ 19 ॥


ಶಿವಾ ಧಾತ್ರೀ ಶುಭಾನಂದಾ ಯಜ್ಞಕರ್ಮಸ್ವರೂಪಿಣೀ ।

ವ್ರತಿನೀ ಮೇನಕಾ ದೇವೀ ಬ್ರಹ್ಮಾಣೀ ಬ್ರಹ್ಮಚಾರಿಣೀ ॥ 20 ॥


ಏಕಾಕ್ಷರಪರಾ ತಾರಾ ಭವಬಂಧವಿನಾಶಿನೀ ।

ವಿಶ್ವಂಭರಾ ಧರಾಧಾರಾ ನಿರಾಧಾರಾಽಧಿಕಸ್ವರಾ ॥ 21 ॥


ರಾಕಾ ಕುಹೂರಮಾವಾಸ್ಯಾ ಪೂರ್ಣಿಮಾಽನುಮತಿರ್ದ್ಯುತಿಃ ।

ಸಿನೀವಾಲೀ ಶಿವಾಽವಶ್ಯಾ ವೈಶ್ವದೇವೀ ಪಿಶಂಗಿಲಾ ॥ 22 ॥


ಪಿಪ್ಪಲಾ ಚ ವಿಶಾಲಾಕ್ಷೀ ರಕ್ಷೋಘ್ನೀ ವೃಷ್ಟಿಕಾರಿಣೀ ।

ದುಷ್ಟವಿದ್ರಾವಿಣೀ ದೇವೀ ಸರ್ವೋಪದ್ರವನಾಶಿನೀ ॥ 23 ॥


ಶಾರದಾ ಶರಸಂಧಾನಾ ಸರ್ವಶಸ್ತ್ರಸ್ವರೂಪಿಣೀ ।

ಯುದ್ಧಮಧ್ಯಸ್ಥಿತಾ ದೇವೀ ಸರ್ವಭೂತಪ್ರಭಂಜನೀ ॥ 24 ॥


ಅಯುದ್ಧಾ ಯುದ್ಧರೂಪಾ ಚ ಶಾಂತಾ ಶಾಂತಿಸ್ವರೂಪಿಣೀ ।

ಗಂಗಾ ಸರಸ್ವತೀವೇಣೀಯಮುನಾನರ್ಮದಾಪಗಾ ॥ 25 ॥


ಸಮುದ್ರವಸನಾವಾಸಾ ಬ್ರಹ್ಮಾಂಡಶ್ರೋಣಿಮೇಖಲಾ ।

ಪಂಚವಕ್ತ್ರಾ ದಶಭುಜಾ ಶುದ್ಧಸ್ಫಟಿಕಸನ್ನಿಭಾ ॥ 26 ॥


ರಕ್ತಾ ಕೃಷ್ಣಾ ಸಿತಾ ಪೀತಾ ಸರ್ವವರ್ಣಾ ನಿರೀಶ್ವರೀ ।

ಕಾಳಿಕಾ ಚಕ್ರಿಕಾ ದೇವೀ ಸತ್ಯಾ ತು ವಟುಕಾಸ್ಥಿತಾ ॥ 27 ॥


ತರುಣೀ ವಾರುಣೀ ನಾರೀ ಜ್ಯೇಷ್ಠಾದೇವೀ ಸುರೇಶ್ವರೀ ।

ವಿಶ್ವಂಭರಾಧರಾ ಕರ್ತ್ರೀ ಗಳಾರ್ಗಳವಿಭಂಜನೀ ॥ 28 ॥


ಸಂಧ್ಯಾರಾತ್ರಿರ್ದಿವಾಜ್ಯೋತ್ಸ್ನಾ ಕಲಾಕಾಷ್ಠಾ ನಿಮೇಷಿಕಾ ।

ಉರ್ವೀ ಕಾತ್ಯಾಯನೀ ಶುಭ್ರಾ ಸಂಸಾರಾರ್ಣವತಾರಿಣೀ ॥ 29 ॥


ಕಪಿಲಾ ಕೀಲಿಕಾಽಶೋಕಾ ಮಲ್ಲಿಕಾನವಮಲ್ಲಿಕಾ । [ ಮಲ್ಲಿಕಾನವಮಾಲಿಕಾ ]

ದೇವಿಕಾ ನಂದಿಕಾ ಶಾಂತಾ ಭಂಜಿಕಾ ಭಯಭಂಜಿಕಾ ॥ 30 ॥


ಕೌಶಿಕೀ ವೈದಿಕೀ ದೇವೀ ಸೌರೀ ರೂಪಾಧಿಕಾಽತಿಭಾ ।

ದಿಗ್ವಸ್ತ್ರಾ ನವವಸ್ತ್ರಾ ಚ ಕನ್ಯಕಾ ಕಮಲೋದ್ಭವಾ ॥ 31 ॥


ಶ್ರೀಸ್ಸೌಮ್ಯಲಕ್ಷಣಾಽತೀತದುರ್ಗಾ ಸೂತ್ರಪ್ರಬೋಧಿಕಾ ।

ಶ್ರದ್ಧಾ ಮೇಧಾ ಕೃತಿಃ ಪ್ರಜ್ಞಾ ಧಾರಣಾ ಕಾಂತಿರೇವ ಚ ॥ 32 ॥


ಶ್ರುತಿಃ ಸ್ಮೃತಿರ್ಧೃತಿರ್ಧನ್ಯಾ ಭೂತಿರಿಷ್ಟಿರ್ಮನೀಷಿಣೀ ।

ವಿರಕ್ತಿರ್ವ್ಯಾಪಿನೀ ಮಾಯಾ ಸರ್ವಮಾಯಾಪ್ರಭಂಜನೀ ॥ 33 ॥


ಮಾಹೇಂದ್ರೀ ಮಂತ್ರಿಣೀ ಸಿಂಹೀ ಚೇಂದ್ರಜಾಲಸ್ವರೂಪಿಣೀ ।

ಅವಸ್ಥಾತ್ರಯನಿರ್ಮುಕ್ತಾ ಗುಣತ್ರಯವಿವರ್ಜಿತಾ ॥ 34 ॥


ಈಷಣಾತ್ರಯನಿರ್ಮುಕ್ತಾ ಸರ್ವರೋಗವಿವರ್ಜಿತಾ ।

ಯೋಗಿಧ್ಯಾನಾಂತಗಮ್ಯಾ ಚ ಯೋಗಧ್ಯಾನಪರಾಯಣಾ ॥ 35 ॥


ತ್ರಯೀಶಿಖಾ ವಿಶೇಷಜ್ಞಾ ವೇದಾಂತಜ್ಞಾನರೂಪಿಣೀ ।

ಭಾರತೀ ಕಮಲಾ ಭಾಷಾ ಪದ್ಮಾ ಪದ್ಮವತೀ ಕೃತಿಃ ॥ 36 ॥


ಗೌತಮೀ ಗೋಮತೀ ಗೌರೀ ಈಶಾನಾ ಹಂಸವಾಹಿನೀ ।

ನಾರಾಯಣೀ ಪ್ರಭಾಧಾರಾ ಜಾಹ್ನವೀ ಶಂಕರಾತ್ಮಜಾ ॥ 37 ॥


ಚಿತ್ರಘಂಟಾ ಸುನಂದಾ ಶ್ರೀರ್ಮಾನವೀ ಮನುಸಂಭವಾ ।

ಸ್ತಂಭಿನೀ ಕ್ಷೋಭಿಣೀ ಮಾರೀ ಭ್ರಾಮಿಣೀ ಶತ್ರುಮಾರಿಣೀ ॥ 38 ॥


ಮೋಹಿನೀ ದ್ವೇಷಿಣೀ ವೀರಾ ಅಘೋರಾ ರುದ್ರರೂಪಿಣೀ ।

ರುದ್ರೈಕಾದಶಿನೀ ಪುಣ್ಯಾ ಕಲ್ಯಾಣೀ ಲಾಭಕಾರಿಣೀ ॥ 39 ॥


ದೇವದುರ್ಗಾ ಮಹಾದುರ್ಗಾ ಸ್ವಪ್ನದುರ್ಗಾಽಷ್ಟಭೈರವೀ ।

ಸೂರ್ಯಚಂದ್ರಾಗ್ನಿರೂಪಾ ಚ ಗ್ರಹನಕ್ಷತ್ರರೂಪಿಣೀ ॥ 40 ॥


ಬಿಂದುನಾದಕಳಾತೀತಾ ಬಿಂದುನಾದಕಳಾತ್ಮಿಕಾ ।

ದಶವಾಯುಜಯಾಕಾರಾ ಕಳಾಷೋಡಶಸಂಯುತಾ ॥ 41 ॥


ಕಾಶ್ಯಪೀ ಕಮಲಾದೇವೀ ನಾದಚಕ್ರನಿವಾಸಿನೀ ।

ಮೃಡಾಧಾರಾ ಸ್ಥಿರಾ ಗುಹ್ಯಾ ದೇವಿಕಾ ಚಕ್ರರೂಪಿಣೀ ॥ 42 ॥


ಅವಿದ್ಯಾ ಶಾರ್ವರೀ ಭುಂಜಾ ಜಂಭಾಸುರನಿಬರ್ಹಿಣೀ ।

ಶ್ರೀಕಾಯಾ ಶ್ರೀಕಲಾ ಶುಭ್ರಾ ಕರ್ಮನಿರ್ಮೂಲಕಾರಿಣೀ ॥ 43 ॥


ಆದಿಲಕ್ಷ್ಮೀರ್ಗುಣಾಧಾರಾ ಪಂಚಬ್ರಹ್ಮಾತ್ಮಿಕಾ ಪರಾ ।

ಶ್ರುತಿರ್ಬ್ರಹ್ಮಮುಖಾವಾಸಾ ಸರ್ವಸಂಪತ್ತಿರೂಪಿಣೀ ॥ 44 ॥


ಮೃತಸಂಜೀವನೀ ಮೈತ್ರೀ ಕಾಮಿನೀ ಕಾಮವರ್ಜಿತಾ ।

ನಿರ್ವಾಣಮಾರ್ಗದಾ ದೇವೀ ಹಂಸಿನೀ ಕಾಶಿಕಾ ಕ್ಷಮಾ ॥ 45 ॥


ಸಪರ್ಯಾ ಗುಣಿನೀ ಭಿನ್ನಾ ನಿರ್ಗುಣಾ ಖಂಡಿತಾಶುಭಾ ।

ಸ್ವಾಮಿನೀ ವೇದಿನೀ ಶಕ್ಯಾ ಶಾಂಬರೀ ಚಕ್ರಧಾರಿಣೀ ॥ 46 ॥


ದಂಡಿನೀ ಮುಂಡಿನೀ ವ್ಯಾಘ್ರೀ ಶಿಖಿನೀ ಸೋಮಸಂಹತಿಃ ।

ಚಿಂತಾಮಣಿಶ್ಚಿದಾನಂದಾ ಪಂಚಬಾಣಪ್ರಬೋಧಿನೀ ॥ 47 ॥


ಬಾಣಶ್ರೇಣಿಸ್ಸಹಸ್ರಾಕ್ಷೀ ಸಹಸ್ರಭುಜಪಾದುಕಾ ।

ಸಂಧ್ಯಾವಲಿಸ್ತ್ರಿಸಂಧ್ಯಾಖ್ಯಾ ಬ್ರಹ್ಮಾಂಡಮಣಿಭೂಷಣಾ ॥ 48 ॥


ವಾಸವೀ ವಾರುಣೀಸೇನಾ ಕುಳಿಕಾ ಮಂತ್ರರಂಜನೀ ।

ಜಿತಪ್ರಾಣಸ್ವರೂಪಾ ಚ ಕಾಂತಾ ಕಾಮ್ಯವರಪ್ರದಾ ॥ 49 ॥


ಮಂತ್ರಬ್ರಾಹ್ಮಣವಿದ್ಯಾರ್ಥಾ ನಾದರೂಪಾ ಹವಿಷ್ಮತೀ ।

ಆಥರ್ವಣಿಃ ಶ್ರುತಿಃ ಶೂನ್ಯಾ ಕಲ್ಪನಾವರ್ಜಿತಾ ಸತೀ ॥ 50 ॥


ಸತ್ತಾಜಾತಿಃ ಪ್ರಮಾಽಮೇಯಾಽಪ್ರಮಿತಿಃ ಪ್ರಾಣದಾ ಗತಿಃ ।

ಅವರ್ಣಾ ಪಂಚವರ್ಣಾ ಚ ಸರ್ವದಾ ಭುವನೇಶ್ವರೀ ॥ 51 ॥


ತ್ರೈಲೋಕ್ಯಮೋಹಿನೀ ವಿದ್ಯಾ ಸರ್ವಭರ್ತ್ರೀ ಕ್ಷರಾಽಕ್ಷರಾ ।

ಹಿರಣ್ಯವರ್ಣಾ ಹರಿಣೀ ಸರ್ವೋಪದ್ರವನಾಶಿನೀ ॥ 52 ॥


ಕೈವಲ್ಯಪದವೀರೇಖಾ ಸೂರ್ಯಮಂಡಲಸಂಸ್ಥಿತಾ ।

ಸೋಮಮಂಡಲಮಧ್ಯಸ್ಥಾ ವಹ್ನಿಮಂಡಲಸಂಸ್ಥಿತಾ ॥ 53 ॥


ವಾಯುಮಂಡಲಮಧ್ಯಸ್ಥಾ ವ್ಯೋಮಮಂಡಲಸಂಸ್ಥಿತಾ ।

ಚಕ್ರಿಕಾ ಚಕ್ರಮಧ್ಯಸ್ಥಾ ಚಕ್ರಮಾರ್ಗಪ್ರವರ್ತಿನೀ ॥ 54 ॥


ಕೋಕಿಲಾಕುಲಚಕ್ರೇಶಾ ಪಕ್ಷತಿಃ ಪಂಕ್ತಿಪಾವನೀ ।

ಸರ್ವಸಿದ್ಧಾಂತಮಾರ್ಗಸ್ಥಾ ಷಡ್ವರ್ಣಾವರವರ್ಜಿತಾ ॥ 55 ॥


ಶರರುದ್ರಹರಾ ಹಂತ್ರೀ ಸರ್ವಸಂಹಾರಕಾರಿಣೀ ।

ಪುರುಷಾ ಪೌರುಷೀ ತುಷ್ಟಿಸ್ಸರ್ವತಂತ್ರಪ್ರಸೂತಿಕಾ ॥ 56 ॥


ಅರ್ಧನಾರೀಶ್ವರೀ ದೇವೀ ಸರ್ವವಿದ್ಯಾಪ್ರದಾಯಿನೀ ।

ಭಾರ್ಗವೀ ಯಾಜುಷೀವಿದ್ಯಾ ಸರ್ವೋಪನಿಷದಾಸ್ಥಿತಾ ॥ 57 ॥ [ ಭುಜುಷೀವಿದ್ಯಾ ]

ವ್ಯೋಮಕೇಶಾಖಿಲಪ್ರಾಣಾ ಪಂಚಕೋಶವಿಲಕ್ಷಣಾ ।

ಪಂಚಕೋಶಾತ್ಮಿಕಾ ಪ್ರತ್ಯಕ್ಪಂಚಬ್ರಹ್ಮಾತ್ಮಿಕಾ ಶಿವಾ ॥ 58 ॥


ಜಗಜ್ಜರಾಜನಿತ್ರೀ ಚ ಪಂಚಕರ್ಮಪ್ರಸೂತಿಕಾ ।

ವಾಗ್ದೇವ್ಯಾಭರಣಾಕಾರಾ ಸರ್ವಕಾಮ್ಯಸ್ಥಿತಾಸ್ಥಿತಿಃ ॥ 59 ॥


ಅಷ್ಟಾದಶಚತುಷ್ಷಷ್ಠಿಪೀಠಿಕಾ ವಿದ್ಯಯಾ ಯುತಾ ।

ಕಾಳಿಕಾಕರ್ಷಣಶ್ಯಾಮಾ ಯಕ್ಷಿಣೀ ಕಿನ್ನರೇಶ್ವರೀ ॥ 60 ॥


ಕೇತಕೀ ಮಲ್ಲಿಕಾಽಶೋಕಾ ವಾರಾಹೀ ಧರಣೀ ಧ್ರುವಾ ।

ನಾರಸಿಂಹೀ ಮಹೋಗ್ರಾಸ್ಯಾ ಭಕ್ತಾನಾಮಾರ್ತಿನಾಶಿನೀ ॥ 61 ॥


ಅಂತರ್ಬಲಾ ಸ್ಥಿರಾ ಲಕ್ಷ್ಮೀರ್ಜರಾಮರಣನಾಶಿನೀ ।

ಶ್ರೀರಂಜಿತಾ ಮಹಾಕಾಯಾ ಸೋಮಸೂರ್ಯಾಗ್ನಿಲೋಚನಾ ॥ 62 ॥


ಅದಿತಿರ್ದೇವಮಾತಾ ಚ ಅಷ್ಟಪುತ್ರಾಽಷ್ಟಯೋಗಿನೀ ।

ಅಷ್ಟಪ್ರಕೃತಿರಷ್ಟಾಷ್ಟವಿಭ್ರಾಜದ್ವಿಕೃತಾಕೃತಿಃ ॥ 63 ॥


ದುರ್ಭಿಕ್ಷಧ್ವಂಸಿನೀ ದೇವೀ ಸೀತಾ ಸತ್ಯಾ ಚ ರುಕ್ಮಿಣೀ ।

ಖ್ಯಾತಿಜಾ ಭಾರ್ಗವೀ ದೇವೀ ದೇವಯೋನಿಸ್ತಪಸ್ವಿನೀ ॥ 64 ॥


ಶಾಕಂಭರೀ ಮಹಾಶೋಣಾ ಗರುಡೋಪರಿಸಂಸ್ಥಿತಾ ।

ಸಿಂಹಗಾ ವ್ಯಾಘ್ರಗಾ ದೇವೀ ವಾಯುಗಾ ಚ ಮಹಾದ್ರಿಗಾ ॥ 65 ॥


ಅಕಾರಾದಿಕ್ಷಕಾರಾಂತಾ ಸರ್ವವಿದ್ಯಾಧಿದೇವತಾ ।

ಮಂತ್ರವ್ಯಾಖ್ಯಾನನಿಪುಣಾ ಜ್ಯೋತಿಶ್ಶಾಸ್ತ್ರೈಕಲೋಚನಾ ॥ 66 ॥


ಇಡಾಪಿಂಗಳಿಕಾಮಧ್ಯಾಸುಷುಮ್ನಾ ಗ್ರಂಥಿಭೇದಿನೀ ।

ಕಾಲಚಕ್ರಾಶ್ರಯೋಪೇತಾ ಕಾಲಚಕ್ರಸ್ವರೂಪಿಣೀ ॥ 67 ॥


ವೈಶಾರದೀ ಮತಿಶ್ಶ್ರೇಷ್ಠಾ ವರಿಷ್ಠಾ ಸರ್ವದೀಪಿಕಾ ।

ವೈನಾಯಕೀ ವರಾರೋಹಾ ಶ್ರೋಣಿವೇಲಾ ಬಹಿರ್ವಲಿಃ ॥ 68 ॥


ಜಂಭಿನೀ ಜೃಂಭಿಣೀ ಜಂಭಕಾರಿಣೀ ಗಣಕಾರಿಕಾ ।

ಶರಣೀ ಚಕ್ರಿಕಾಽನಂತಾ ಸರ್ವವ್ಯಾಧಿಚಿಕಿತ್ಸಕೀ ॥ 69 ॥


ದೇವಕೀ ದೇವಸಂಕಾಶಾ ವಾರಿಧಿಃ ಕರುಣಾಕರಾ ।

ಶರ್ವರೀ ಸರ್ವಸಂಪನ್ನಾ ಸರ್ವಪಾಪಪ್ರಭಂಜನೀ ॥ 70 ॥


ಏಕಮಾತ್ರಾ ದ್ವಿಮಾತ್ರಾ ಚ ತ್ರಿಮಾತ್ರಾ ಚ ತಥಾಽಪರಾ ।

ಅರ್ಧಮಾತ್ರಾ ಪರಾ ಸೂಕ್ಷ್ಮಾ ಸೂಕ್ಷ್ಮಾರ್ಥಾಽರ್ಥಪರಾಽಪರಾ ॥ 71 ॥


ಏಕವೀರಾ ವಿಶೇಷಾಖ್ಯಾ ಷಷ್ಠೀದೇವೀ ಮನಸ್ವಿನೀ ।

ನೈಷ್ಕರ್ಮ್ಯಾ ನಿಷ್ಕಲಾಲೋಕಾ ಜ್ಞಾನಕರ್ಮಾಧಿಕಾ ಗುಣಾ ॥ 72 ॥


ಸಬಂಧ್ವಾನಂದಸಂದೋಹಾ ವ್ಯೋಮಾಕಾರಾಽನಿರೂಪಿತಾ ।

ಗದ್ಯಪದ್ಯಾತ್ಮಿಕಾ ವಾಣೀ ಸರ್ವಾಲಂಕಾರಸಂಯುತಾ ॥ 73 ॥


ಸಾಧುಬಂಧಪದನ್ಯಾಸಾ ಸರ್ವೌಕೋ ಘಟಿಕಾವಲಿಃ ।

ಷಟ್ಕರ್ಮಾ ಕರ್ಕಶಾಕಾರಾ ಸರ್ವಕರ್ಮವಿವರ್ಜಿತಾ ॥ 74 ॥


ಆದಿತ್ಯವರ್ಣಾ ಚಾಪರ್ಣಾ ಕಾಮಿನೀ ವರರೂಪಿಣೀ ।

ಬ್ರಹ್ಮಾಣೀ ಬ್ರಹ್ಮಸಂತಾನಾ ವೇದವಾಗೀಶ್ವರೀ ಶಿವಾ ॥ 75 ॥


ಪುರಾಣನ್ಯಾಯಮೀಮಾಂಸಾಧರ್ಮಶಾಸ್ತ್ರಾಗಮಶ್ರುತಾ ।

ಸದ್ಯೋವೇದವತೀ ಸರ್ವಾ ಹಂಸೀ ವಿದ್ಯಾಧಿದೇವತಾ ॥ 76 ॥


ವಿಶ್ವೇಶ್ವರೀ ಜಗದ್ಧಾತ್ರೀ ವಿಶ್ವನಿರ್ಮಾಣಕಾರಿಣೀ ।

ವೈದಿಕೀ ವೇದರೂಪಾ ಚ ಕಾಲಿಕಾ ಕಾಲರೂಪಿಣೀ ॥ 77 ॥


ನಾರಾಯಣೀ ಮಹಾದೇವೀ ಸರ್ವತತ್ತ್ವಪ್ರವರ್ತಿನೀ ।

ಹಿರಣ್ಯವರ್ಣರೂಪಾ ಚ ಹಿರಣ್ಯಪದಸಂಭವಾ ॥ 78 ॥


ಕೈವಲ್ಯಪದವೀ ಪುಣ್ಯಾ ಕೈವಲ್ಯಜ್ಞಾನಲಕ್ಷಿತಾ ।

ಬ್ರಹ್ಮಸಂಪತ್ತಿರೂಪಾ ಚ ಬ್ರಹ್ಮಸಂಪತ್ತಿಕಾರಿಣೀ ॥ 79 ॥


ವಾರುಣೀ ವಾರುಣಾರಾಧ್ಯಾ ಸರ್ವಕರ್ಮಪ್ರವರ್ತಿನೀ ।

ಏಕಾಕ್ಷರಪರಾಽಽಯುಕ್ತಾ ಸರ್ವದಾರಿದ್ರ್ಯಭಂಜಿನೀ ॥ 80 ॥


ಪಾಶಾಂಕುಶಾನ್ವಿತಾ ದಿವ್ಯಾ ವೀಣಾವ್ಯಾಖ್ಯಾಕ್ಷಸೂತ್ರಭೃತ್ ।

ಏಕಮೂರ್ತಿಸ್ತ್ರಯೀಮೂರ್ತಿರ್ಮಧುಕೈಟಭಭಂಜಿನೀ ॥ 81 ॥


ಸಾಂಖ್ಯಾ ಸಾಂಖ್ಯವತೀ ಜ್ವಾಲಾ ಜ್ವಲಂತೀ ಕಾಮರೂಪಿಣೀ ।

ಜಾಗ್ರತೀ ಸರ್ವಸಂಪತ್ತಿಸ್ಸುಷುಪ್ತಾ ಸ್ವೇಷ್ಟದಾಯಿನೀ ॥ 82 ॥


ಕಪಾಲಿನೀ ಮಹಾದಂಷ್ಟ್ರಾ ಭ್ರುಕುಟೀ ಕುಟಿಲಾನನಾ ।

ಸರ್ವಾವಾಸಾ ಸುವಾಸಾ ಚ ಬೃಹತ್ಯಷ್ಟಿಶ್ಚ ಶಕ್ವರೀ ॥ 83 ॥


ಛಂದೋಗಣಪ್ರತಿಷ್ಠಾ ಚ ಕಲ್ಮಾಷೀ ಕರುಣಾತ್ಮಿಕಾ ।

ಚಕ್ಷುಷ್ಮತೀ ಮಹಾಘೋಷಾ ಖಡ್ಗಚರ್ಮಧರಾಽಶನಿಃ ॥ 84 ॥


ಶಿಲ್ಪವೈಚಿತ್ರ್ಯವಿದ್ಯೋತಾ ಸರ್ವತೋಭದ್ರವಾಸಿನೀ ।

ಅಚಿಂತ್ಯಲಕ್ಷಣಾಕಾರಾ ಸೂತ್ರಭಾಷ್ಯನಿಬಂಧನಾ ॥ 85 ॥


ಸರ್ವವೇದಾರ್ಥಸಂಪತ್ತಿಸ್ಸರ್ವಶಾಸ್ತ್ರಾರ್ಥಮಾತೃಕಾ ।

ಅಕಾರಾದಿಕ್ಷಕಾರಾಂತಸರ್ವವರ್ಣಕೃತಸ್ಥಲಾ ॥ 86 ॥


ಸರ್ವಲಕ್ಷ್ಮೀಸ್ಸದಾನಂದಾ ಸಾರವಿದ್ಯಾ ಸದಾಶಿವಾ ।

ಸರ್ವಜ್ಞಾ ಸರ್ವಶಕ್ತಿಶ್ಚ ಖೇಚರೀರೂಪಗೋಚ್ಛ್ರಿತಾ ॥ 87 ॥


ಅಣಿಮಾದಿಗುಣೋಪೇತಾ ಪರಾ ಕಾಷ್ಠಾ ಪರಾ ಗತಿಃ ।

ಹಂಸಯುಕ್ತವಿಮಾನಸ್ಥಾ ಹಂಸಾರೂಢಾ ಶಶಿಪ್ರಭಾ ॥ 88 ॥


ಭವಾನೀ ವಾಸನಾಶಕ್ತಿರಾಕೃತಿಸ್ಥಾಖಿಲಾಽಖಿಲಾ ।

ತಂತ್ರಹೇತುರ್ವಿಚಿತ್ರಾಂಗೀ ವ್ಯೋಮಗಂಗಾವಿನೋದಿನೀ ॥ 89 ॥


ವರ್ಷಾ ಚ ವಾರ್ಷಿಕಾ ಚೈವ ಋಗ್ಯಜುಸ್ಸಾಮರೂಪಿಣೀ ।

ಮಹಾನದೀನದೀಪುಣ್ಯಾಽಗಣ್ಯಪುಣ್ಯಗುಣಕ್ರಿಯಾ ॥ 90 ॥


ಸಮಾಧಿಗತಲಭ್ಯಾರ್ಥಾ ಶ್ರೋತವ್ಯಾ ಸ್ವಪ್ರಿಯಾ ಘೃಣಾ ।

ನಾಮಾಕ್ಷರಪರಾ ದೇವೀ ಉಪಸರ್ಗನಖಾಂಚಿತಾ ॥ 91 ॥


ನಿಪಾತೋರುದ್ವಯೀಜಂಘಾ ಮಾತೃಕಾ ಮಂತ್ರರೂಪಿಣೀ ।

ಆಸೀನಾ ಚ ಶಯಾನಾ ಚ ತಿಷ್ಠಂತೀ ಧಾವನಾಧಿಕಾ ॥ 92 ॥


ಲಕ್ಷ್ಯಲಕ್ಷಣಯೋಗಾಢ್ಯಾ ತಾದ್ರೂಪ್ಯಗಣನಾಕೃತಿಃ ।

ಸೈಕರೂಪಾ ನೈಕರೂಪಾ ಸೇಂದುರೂಪಾ ತದಾಕೃತಿಃ ॥ 93 ॥


ಸಮಾಸತದ್ಧಿತಾಕಾರಾ ವಿಭಕ್ತಿವಚನಾತ್ಮಿಕಾ ।

ಸ್ವಾಹಾಕಾರಾ ಸ್ವಧಾಕಾರಾ ಶ್ರೀಪತ್ಯರ್ಧಾಂಗನಂದಿನೀ ॥ 94 ॥


ಗಂಭೀರಾ ಗಹನಾ ಗುಹ್ಯಾ ಯೋನಿಲಿಂಗಾರ್ಧಧಾರಿಣೀ ।

ಶೇಷವಾಸುಕಿಸಂಸೇವ್ಯಾ ಚಪಲಾ ವರವರ್ಣಿನೀ ॥ 95 ॥


ಕಾರುಣ್ಯಾಕಾರಸಂಪತ್ತಿಃ ಕೀಲಕೃನ್ಮಂತ್ರಕೀಲಿಕಾ ।

ಶಕ್ತಿಬೀಜಾತ್ಮಿಕಾ ಸರ್ವಮಂತ್ರೇಷ್ಟಾಕ್ಷಯಕಾಮನಾ ॥ 96 ॥


ಆಗ್ನೇಯೀ ಪಾರ್ಥಿವಾ ಆಪ್ಯಾ ವಾಯವ್ಯಾ ವ್ಯೋಮಕೇತನಾ ।

ಸತ್ಯಜ್ಞಾನಾತ್ಮಿಕಾಽಽನಂದಾ ಬ್ರಾಹ್ಮೀ ಬ್ರಹ್ಮ ಸನಾತನೀ ॥ 97 ॥


ಅವಿದ್ಯಾವಾಸನಾ ಮಾಯಾಪ್ರಕೃತಿಸ್ಸರ್ವಮೋಹಿನೀ ।

ಶಕ್ತಿರ್ಧಾರಣಶಕ್ತಿಶ್ಚ ಚಿದಚಿಚ್ಛಕ್ತಿಯೋಗಿನೀ ॥ 98 ॥


ವಕ್ತ್ರಾರುಣಾ ಮಹಾಮಾಯಾ ಮರೀಚಿರ್ಮದಮರ್ದಿನೀ ।

ವಿರಾಟ್ ಸ್ವಾಹಾ ಸ್ವಧಾ ಶುದ್ಧಾ ನೀರೂಪಾಸ್ತಿಸ್ಸುಭಕ್ತಿಗಾ ॥ 99 ॥


ನಿರೂಪಿತಾದ್ವಯೀವಿದ್ಯಾ ನಿತ್ಯಾನಿತ್ಯಸ್ವರೂಪಿಣೀ ।

ವೈರಾಜಮಾರ್ಗಸಂಚಾರಾ ಸರ್ವಸತ್ಪಥದರ್ಶಿನೀ ॥ 100 ॥


ಜಾಲಂಧರೀ ಮೃಡಾನೀ ಚ ಭವಾನೀ ಭವಭಂಜನೀ ।

ತ್ರೈಕಾಲಿಕಜ್ಞಾನತಂತುಸ್ತ್ರಿಕಾಲಜ್ಞಾನದಾಯಿನೀ ॥ 101 ॥


ನಾದಾತೀತಾ ಸ್ಮೃತಿಃ ಪ್ರಜ್ಞಾ ಧಾತ್ರೀರೂಪಾ ತ್ರಿಪುಷ್ಕರಾ ।

ಪರಾಜಿತಾವಿಧಾನಜ್ಞಾ ವಿಶೇಷಿತಗುಣಾತ್ಮಿಕಾ ॥ 102 ॥


ಹಿರಣ್ಯಕೇಶಿನೀ ಹೇಮಬ್ರಹ್ಮಸೂತ್ರವಿಚಕ್ಷಣಾ ।

ಅಸಂಖ್ಯೇಯಪರಾರ್ಧಾಂತಸ್ವರವ್ಯಂಜನವೈಖರೀ ॥ 103 ॥


ಮಧುಜಿಹ್ವಾ ಮಧುಮತೀ ಮಧುಮಾಸೋದಯಾ ಮಧುಃ ।

ಮಾಧವೀ ಚ ಮಹಾಭಾಗಾ ಮೇಘಗಂಭೀರನಿಸ್ವನಾ ॥ 104 ॥


ಬ್ರಹ್ಮವಿಷ್ಣುಮಹೇಶಾದಿಜ್ಞಾತವ್ಯಾರ್ಥವಿಶೇಷಗಾ ।

ನಾಭೌ ವಹ್ನಿಶಿಖಾಕಾರಾ ಲಲಾಟೇ ಚಂದ್ರಸನ್ನಿಭಾ ॥ 105 ॥


ಭ್ರೂಮಧ್ಯೇ ಭಾಸ್ಕರಾಕಾರಾ ಸರ್ವತಾರಾಕೃತಿರ್ಹೃದಿ ।

ಕೃತ್ತಿಕಾದಿಭರಣ್ಯಂತನಕ್ಷತ್ರೇಷ್ಟ್ಯಾರ್ಚಿತೋದಯಾ ॥ 106 ॥


ಗ್ರಹವಿದ್ಯಾತ್ಮಿಕಾ ಜ್ಯೋತಿರ್ಜ್ಯೋತಿರ್ವಿನ್ಮತಿಜೀವಿಕಾ ।

ಬ್ರಹ್ಮಾಂಡಗರ್ಭಿಣೀ ಬಾಲಾ ಸಪ್ತಾವರಣದೇವತಾ ॥ 107 ॥


ವೈರಾಜೋತ್ತಮಸಾಮ್ರಾಜ್ಯಾ ಕುಮಾರಕುಶಲೋದಯಾ ।

ಬಗಳಾ ಭ್ರಮರಾಂಬಾ ಚ ಶಿವದೂತೀ ಶಿವಾತ್ಮಿಕಾ ॥ 108 ॥


ಮೇರುವಿಂಧ್ಯಾದಿಸಂಸ್ಥಾನಾ ಕಾಶ್ಮೀರಪುರವಾಸಿನೀ ।

ಯೋಗನಿದ್ರಾ ಮಹಾನಿದ್ರಾ ವಿನಿದ್ರಾ ರಾಕ್ಷಸಾಶ್ರಿತಾ ॥ 109 ॥


ಸುವರ್ಣದಾ ಮಹಾಗಂಗಾ ಪಂಚಾಖ್ಯಾ ಪಂಚಸಂಹತಿಃ ।

ಸುಪ್ರಜಾತಾ ಸುವೀರಾ ಚ ಸುಪೋಷಾ ಸುಪತಿಶ್ಶಿವಾ ॥ 110 ॥


ಸುಗೃಹಾ ರಕ್ತಬೀಜಾಂತಾ ಹತಕಂದರ್ಪಜೀವಿಕಾ ।

ಸಮುದ್ರವ್ಯೋಮಮಧ್ಯಸ್ಥಾ ಸಮಬಿಂದುಸಮಾಶ್ರಯಾ ॥ 111 ॥


ಸೌಭಾಗ್ಯರಸಜೀವಾತುಸ್ಸಾರಾಸಾರವಿವೇಕದೃಕ್ ।

ತ್ರಿವಲ್ಯಾದಿಸುಪುಷ್ಟಾಂಗಾ ಭಾರತೀ ಭರತಾಶ್ರಿತಾ ॥ 112 ॥


ನಾದಬ್ರಹ್ಮಮಯೀವಿದ್ಯಾ ಜ್ಞಾನಬ್ರಹ್ಮಮಯೀಪರಾ ।

ಬ್ರಹ್ಮನಾಡೀ ನಿರುಕ್ತಿಶ್ಚ ಬ್ರಹ್ಮಕೈವಲ್ಯಸಾಧನಮ್ ॥ 113 ॥


ಕಾಲಿಕೇಯಮಹೋದಾರವೀರ್ಯವಿಕ್ರಮರೂಪಿಣೀ ।

ವಡವಾಗ್ನಿಶಿಖಾವಕ್ತ್ರಾ ಮಹಾಕವಲತರ್ಪಣಾ ॥ 114 ॥


ಮಹಾಭೂತಾ ಮಹಾದರ್ಪಾ ಮಹಾಸಾರಾ ಮಹಾಕ್ರತುಃ ।

ಪಂಜಭೂತಮಹಾಗ್ರಾಸಾ ಪಂಚಭೂತಾಧಿದೇವತಾ ॥ 115 ॥


ಸರ್ವಪ್ರಮಾಣಾ ಸಂಪತ್ತಿಸ್ಸರ್ವರೋಗಪ್ರತಿಕ್ರಿಯಾ ।

ಬ್ರಹ್ಮಾಂಡಾಂತರ್ಬಹಿರ್ವ್ಯಾಪ್ತಾ ವಿಷ್ಣುವಕ್ಷೋವಿಭೂಷಿಣೀ ॥ 116 ॥


ಶಾಂಕರೀ ವಿಧಿವಕ್ತ್ರಸ್ಥಾ ಪ್ರವರಾ ವರಹೇತುಕೀ ।

ಹೇಮಮಾಲಾ ಶಿಖಾಮಾಲಾ ತ್ರಿಶಿಖಾ ಪಂಚಲೋಚನಾ ॥ 117 ॥ [ ಪಂಚಮೋಚನಾ ]

ಸರ್ವಾಗಮಸದಾಚಾರಮರ್ಯಾದಾ ಯಾತುಭಂಜನೀ ।

ಪುಣ್ಯಶ್ಲೋಕಪ್ರಬಂಧಾಢ್ಯಾ ಸರ್ವಾಂತರ್ಯಾಮಿರೂಪಿಣೀ ॥ 118 ॥


ಸಾಮಗಾನಸಮಾರಾಧ್ಯಾ ಶ್ರೋತ್ರಕರ್ಣರಸಾಯನಮ್ ।

ಜೀವಲೋಕೈಕಜೀವಾತುರ್ಭದ್ರೋದಾರವಿಲೋಕನಾ ॥ 119 ॥


ತಟಿತ್ಕೋಟಿಲಸತ್ಕಾಂತಿಸ್ತರುಣೀ ಹರಿಸುಂದರೀ ।

ಮೀನನೇತ್ರಾ ಚ ಸೇಂದ್ರಾಕ್ಷೀ ವಿಶಾಲಾಕ್ಷೀ ಸುಮಂಗಳಾ ॥ 120 ॥


ಸರ್ವಮಂಗಳಸಂಪನ್ನಾ ಸಾಕ್ಷಾನ್ಮಂಗಳದೇವತಾ ।

ದೇಹಹೃದ್ದೀಪಿಕಾ ದೀಪ್ತಿರ್ಜಿಹ್ವಪಾಪಪ್ರಣಾಶಿನೀ ॥ 121 ॥


ಅರ್ಧಚಂದ್ರೋಲ್ಲಸದ್ದಂಷ್ಟ್ರಾ ಯಜ್ಞವಾಟೀವಿಲಾಸಿನೀ ।

ಮಹಾದುರ್ಗಾ ಮಹೋತ್ಸಾಹಾ ಮಹಾದೇವಬಲೋದಯಾ ॥ 122 ॥


ಡಾಕಿನೀಡ್ಯಾ ಶಾಕಿನೀಡ್ಯಾ ಸಾಕಿನೀಡ್ಯಾ ಸಮಸ್ತಜುಟ್ ।

ನಿರಂಕುಶಾ ನಾಕಿವಂದ್ಯಾ ಷಡಾಧಾರಾಧಿದೇವತಾ ॥ 123 ॥


ಭುವನಜ್ಞಾನಿನಿಶ್ಶ್ರೇಣೀ ಭುವನಾಕಾರವಲ್ಲರೀ ।

ಶಾಶ್ವತೀ ಶಾಶ್ವತಾಕಾರಾ ಲೋಕಾನುಗ್ರಹಕಾರಿಣೀ ॥ 124 ॥


ಸಾರಸೀ ಮಾನಸೀ ಹಂಸೀ ಹಂಸಲೋಕಪ್ರದಾಯಿನೀ ।

ಚಿನ್ಮುದ್ರಾಲಂಕೃತಕರಾ ಕೋಟಿಸೂರ್ಯಸಮಪ್ರಭಾ ॥ 125 ॥


ಸುಖಪ್ರಾಣಿಶಿರೋರೇಖಾ ಸದದೃಷ್ಟಪ್ರದಾಯಿನೀ ।

ಸರ್ವಸಾಂಕರ್ಯದೋಷಘ್ನೀ ಗ್ರಹೋಪದ್ರವನಾಶಿನೀ ॥ 126 ॥


ಕ್ಷುದ್ರಜಂತುಭಯಘ್ನೀ ಚ ವಿಷರೋಗಾದಿಭಂಜನೀ ।

ಸದಾಶಾಂತಾ ಸದಾಶುದ್ಧಾ ಗೃಹಚ್ಛಿದ್ರನಿವಾರಿಣೀ ॥ 127 ॥


ಕಲಿದೋಷಪ್ರಶಮನೀ ಕೋಲಾಹಲಪುರಸ್ಥಿತಾ ।

ಗೌರೀ ಲಾಕ್ಷಣಿಕೀ ಮುಖ್ಯಾ ಜಘನ್ಯಾಕೃತಿವರ್ಜಿತಾ ॥ 128 ॥


ಮಾಯಾ ವಿದ್ಯಾ ಮೂಲಭೂತಾ ವಾಸವೀ ವಿಷ್ಣುಚೇತನಾ ।

ವಾದಿನೀ ವಸುರೂಪಾ ಚ ವಸುರತ್ನಪರಿಚ್ಛದಾ ॥ 129 ॥


ಛಾಂದಸೀ ಚಂದ್ರಹೃದಯಾ ಮಂತ್ರಸ್ವಚ್ಛಂದಭೈರವೀ ।

ವನಮಾಲಾ ವೈಜಯಂತೀ ಪಂಚದಿವ್ಯಾಯುಧಾತ್ಮಿಕಾ ॥ 130 ॥


ಪೀತಾಂಬರಮಯೀ ಚಂಚತ್ಕೌಸ್ತುಭಾ ಹರಿಕಾಮಿನೀ ।

ನಿತ್ಯಾ ತಥ್ಯಾ ರಮಾ ರಾಮಾ ರಮಣೀ ಮೃತ್ಯುಭಂಜನೀ ॥ 131 ॥


ಜ್ಯೇಷ್ಠಾ ಕಾಷ್ಠಾ ಧನಿಷ್ಠಾಂತಾ ಶರಾಂಗೀ ನಿರ್ಗುಣಪ್ರಿಯಾ ।

ಮೈತ್ರೇಯಾ ಮಿತ್ರವಿಂದಾ ಚ ಶೇಷ್ಯಶೇಷಕಲಾಶಯಾ ॥ 132 ॥


ವಾರಾಣಸೀವಾಸಲಭ್ಯಾ ಚಾರ್ಯಾವರ್ತಜನಸ್ತುತಾ । [ ವಾರಾಣಸೀವಾಸರತಾ ]

ಜಗದುತ್ಪತ್ತಿಸಂಸ್ಥಾನಸಂಹಾರತ್ರಯಕಾರಣಮ್ ॥ 133 ॥


ತ್ವಮಂಬ ವಿಷ್ಣುಸರ್ವಸ್ವಂ ನಮಸ್ತೇಽಸ್ತು ಮಹೇಶ್ವರಿ ।

ನಮಸ್ತೇ ಸರ್ವಲೋಕಾನಾಂ ಜನನ್ಯೈ ಪುಣ್ಯಮೂರ್ತಯೇ ॥ 134 ॥


ಸಿದ್ಧಲಕ್ಷ್ಮೀರ್ಮಹಾಕಾಳಿ ಮಹಲಕ್ಷ್ಮಿ ನಮೋಽಸ್ತು ತೇ ।

ಸದ್ಯೋಜಾತಾದಿಪಂಚಾಗ್ನಿರೂಪಾ ಪಂಚಕಪಂಚಕಮ್ ॥ 135 ॥


ಯಂತ್ರಲಕ್ಷ್ಮೀರ್ಭವತ್ಯಾದಿರಾದ್ಯಾದ್ಯೇ ತೇ ನಮೋ ನಮಃ ।

ಸೃಷ್ಟ್ಯಾದಿಕಾರಣಾಕಾರವಿತತೇ ದೋಷವರ್ಜಿತೇ ॥ 136 ॥


ಜಗಲ್ಲಕ್ಷ್ಮೀರ್ಜಗನ್ಮಾತರ್ವಿಷ್ಣುಪತ್ನಿ ನಮೋಽಸ್ತು ತೇ ।

ನವಕೋಟಿಮಹಾಶಕ್ತಿಸಮುಪಾಸ್ಯಪದಾಂಬುಜೇ ॥ 137 ॥


ಕನತ್ಸೌವರ್ಣರತ್ನಾಢ್ಯ ಸರ್ವಾಭರಣಭೂಷಿತೇ ।

ಅನಂತಾನಿತ್ಯಮಹಿಷೀಪ್ರಪಂಚೇಶ್ವರನಾಯಕಿ ॥ 138 ॥


ಅತ್ಯುಚ್ಛ್ರಿತಪದಾಂತಸ್ಥೇ ಪರಮವ್ಯೋಮನಾಯಕಿ ।

ನಾಕಪೃಷ್ಠಗತಾರಾಧ್ಯೇ ವಿಷ್ಣುಲೋಕವಿಲಾಸಿನಿ ॥ 139 ॥


ವೈಕುಂಠರಾಜಮಹಿಷಿ ಶ್ರೀರಂಗನಗರಾಶ್ರಿತೇ ।

ರಂಗನಾಯಕಿ ಭೂಪುತ್ರಿ ಕೃಷ್ಣೇ ವರದವಲ್ಲಭೇ ॥ 140 ॥


ಕೋಟಿಬ್ರಹ್ಮಾದಿಸಂಸೇವ್ಯೇ ಕೋಟಿರುದ್ರಾದಿಕೀರ್ತಿತೇ ।

ಮಾತುಲುಂಗಮಯಂ ಖೇಟಂ ಸೌವರ್ಣಚಷಕಂ ತಥಾ ॥ 141 ॥


ಪದ್ಮದ್ವಯಂ ಪೂರ್ಣಕುಂಭಂ ಕೀರಂಚ ವರದಾಭಯೇ ।

ಪಾಶಮಂಕುಶಕಂ ಶಂಖಂ ಚಕ್ರಂ ಶೂಲಂ ಕೃಪಾಣಿಕಾಮ್ ॥ 142 ॥


ಧನುರ್ಬಾಣೌ ಚಾಕ್ಷಮಾಲಾಂ ಚಿನ್ಮುದ್ರಾಮಪಿ ಬಿಭ್ರತೀ ।

ಅಷ್ಟಾದಶಭುಜೇ ಲಕ್ಷ್ಮೀರ್ಮಹಾಷ್ಟಾದಶಪೀಠಗೇ ॥ 143 ॥


ಭೂಮಿನೀಲಾದಿಸಂಸೇವ್ಯೇ ಸ್ವಾಮಿಚಿತ್ತಾನುವರ್ತಿನಿ ।

ಪದ್ಮೇ ಪದ್ಮಾಲಯೇ ಪದ್ಮಿ ಪೂರ್ಣಕುಂಭಾಭಿಷೇಚಿತೇ ॥ 144 ॥


ಇಂದಿರೇಂದಿಂದಿರಾಭಾಕ್ಷಿ ಕ್ಷೀರಸಾಗರಕನ್ಯಕೇ ।

ಭಾರ್ಗವಿ ತ್ವಂ ಸ್ವತಂತ್ರೇಚ್ಛಾ ವಶೀಕೃತಜಗತ್ಪತಿಃ ॥ 145 ॥


ಮಂಗಳಂ ಮಂಗಳಾನಾಂ ತ್ವಂ ದೇವತಾನಾಂ ಚ ದೇವತಾ ।

ತ್ವಮುತ್ತಮೋತ್ತಮಾನಾಂ ಚ ತ್ವಂ ಶ್ರೇಯಃ ಪರಮಾಮೃತಮ್ ॥ 146 ॥


ಧನಧಾನ್ಯಾಭಿವೃದ್ಧಿಶ್ಚ ಸಾರ್ವಭೌಮಸುಖೋಚ್ಛ್ರಯಾ ।

ಆಂದೋಳಿಕಾದಿಸೌಭಾಗ್ಯಂ ಮತ್ತೇಭಾದಿಮಹೋದಯಃ ॥ 147 ॥


ಪುತ್ರಪೌತ್ರಾಭಿವೃದ್ಧಿಶ್ಚ ವಿದ್ಯಾಭೋಗಬಲಾದಿಕಮ್ ।

ಆಯುರಾರೋಗ್ಯಸಂಪತ್ತಿರಷ್ಟೈಶ್ವರ್ಯಂ ತ್ವಮೇವ ಹಿ ॥ 148 ॥


ಪರಮೇಶವಿಭೂತಿಶ್ಚ ಸೂಕ್ಷ್ಮಾತ್ಸೂಕ್ಷ್ಮತರಾಗತಿಃ ।

ಸದಯಾಪಾಂಗಸಂದತ್ತಬ್ರಹ್ಮೇಂದ್ರಾದಿಪದಸ್ಥಿತಿಃ ॥ 149 ॥


ಅವ್ಯಾಹತಮಹಾಭಾಗ್ಯಂ ತ್ವಮೇವಾಕ್ಷೋಭ್ಯವಿಕ್ರಮಃ ।

ಸಮನ್ವಯಶ್ಚ ವೇದಾನಾಮವಿರೋಧಸ್ತ್ವಮೇವ ಹಿ ॥ 150 ॥


ನಿಃಶ್ರೇಯಸಪದಪ್ರಾಪ್ತಿಸಾಧನಂ ಫಲಮೇವ ಚ ।

ಶ್ರೀಮಂತ್ರರಾಜರಾಜ್ಞೀ ಚ ಶ್ರೀವಿದ್ಯಾ ಕ್ಷೇಮಕಾರಿಣೀ ॥ 151 ॥


ಶ್ರೀಂಬೀಜಜಪಸಂತುಷ್ಟಾ ಐಂ ಹ್ರೀಂ ಶ್ರೀಂ ಬೀಜಪಾಲಿಕಾ ।

ಪ್ರಪತ್ತಿಮಾರ್ಗಸುಲಭಾ ವಿಷ್ಣುಪ್ರಥಮಕಿಂಕರೀ ॥ 152 ॥


ಕ್ಲೀಂಕಾರಾರ್ಥಸವಿತ್ರೀ ಚ ಸೌಮಂಗಳ್ಯಾಧಿದೇವತಾ ।

ಶ್ರೀಷೋಡಶಾಕ್ಷರೀವಿದ್ಯಾ ಶ್ರೀಯಂತ್ರಪುರವಾಸಿನೀ ॥ 153 ॥


ಸರ್ವಮಂಗಳಮಾಂಗಳ್ಯೇ ಶಿವೇ ಸರ್ವಾರ್ಥಸಾಧಿಕೇ ।

ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಽಸ್ತು ತೇ ॥ 154 ॥


ಪುನಃ ಪುನರ್ನಮಸ್ತೇಽಸ್ತು ಸಾಷ್ಟಾಂಗಮಯುತಂ ಪುನಃ ।

ಸನತ್ಕುಮಾರ ಉವಾಚ-

ಏವಂ ಸ್ತುತಾ ಮಹಾಲಕ್ಷ್ಮೀರ್ಬ್ರಹ್ಮರುದ್ರಾದಿಭಿಸ್ಸುರೈಃ ।

ನಮದ್ಭಿರಾರ್ತೈರ್ದೀನೈಶ್ಚ ನಿಸ್ಸ್ವತ್ವೈರ್ಭೋಗವರ್ಜಿತೈಃ ॥ 1 ॥


ಜ್ಯೇಷ್ಠಾ ಜುಷ್ಟೈಶ್ಚ ನಿಶ್ಶ್ರೀಕೈಸ್ಸಂಸಾರಾತ್ಸ್ವಪರಾಯಣೈಃ ।

ವಿಷ್ಣುಪತ್ನೀ ದದೌ ತೇಷಾಂ ದರ್ಶನಂ ದೃಷ್ಟಿತರ್ಪಣಮ್ ॥ 2 ॥


ಶರತ್ಪೂರ್ಣೇಂದುಕೋಟ್ಯಾಭಧವಳಾಪಾಂಗವೀಕ್ಷಣೈಃ ।

ಸರ್ವಾನ್ಸತ್ತ್ವಸಮಾವಿಷ್ಟಾನ್ ಚಕ್ರೇ ಹೃಷ್ಟಾ ವರಂ ದದೌ ॥ 3 ॥


ಮಹಾಲಕ್ಷ್ಮೀರುವಾಚ-

ನಾಮ್ನಾಂ ಸಾಷ್ಟಸಹಸ್ರಂ ಮೇ ಪ್ರಮಾದಾದ್ವಾಪಿ ಯಸ್ಸಕೃತ್ ।

ಕೀರ್ತಯೇತ್ತತ್ಕುಲೇ ಸತ್ಯಂ ವಸಾಮ್ಯಾಚಂದ್ರತಾರಕಮ್ ॥ 4 ॥


ಕಿಂ ಪುನರ್ನಿಯಮಾಜ್ಜಪ್ತುರ್ಮದೇಕಶರಣಸ್ಯ ಚ ।

ಮಾತೃವತ್ಸಾನುಕಂಪಾಹಂ ಪೋಷಕೀ ಸ್ಯಾಮಹರ್ನಿಶಮ್ ॥ 5 ॥


ಮನ್ನಾಮ ಸ್ತವತಾಂ ಲೋಕೇ ದುರ್ಲಭಂ ನಾಸ್ತಿ ಚಿಂತಿತಮ್ ।

ಮತ್ಪ್ರಸಾದೇನ ಸರ್ವೇಽಪಿ ಸ್ವಸ್ವೇಷ್ಟಾರ್ಥಮವಾಪ್ಸ್ಯಥ ॥ 6 ॥


ಲುಪ್ತವೈಷ್ಣವಧರ್ಮಸ್ಯ ಮದ್ವ್ರತೇಷ್ವವಕೀರ್ಣಿನಃ ।

ಭಕ್ತಿಪ್ರಪತ್ತಿಹೀನಸ್ಯ ವಂದ್ಯೋ ನಾಮ್ನಾಂ ಸ್ತವೋಽಪಿ ಮೇ ॥ 7 ॥


ತಸ್ಮಾದವಶ್ಯಂ ತೈರ್ದೋಷೈರ್ವಿಹೀನಃ ಪಾಪವರ್ಜಿತಃ ।

ಜಪೇತ್ಸಾಷ್ಟಸಹಸ್ರಂ ಮೇ ನಾಮ್ನಾಂ ಪ್ರತ್ಯಹಮಾದರಾತ್ ॥ 8 ॥


ಸಾಕ್ಷಾದಲಕ್ಷ್ಮೀಪುತ್ರೋಽಪಿ ದುರ್ಭಾಗ್ಯೋಽಪ್ಯಲಸೋಽಪಿ ವಾ ।

ಅಪ್ರಯತ್ನೋಽಪಿ ಮೂಢೋಽಪಿ ವಿಕಲಃ ಪತಿತೋಽಪಿ ಚ ॥ 9 ॥


ಅವಶ್ಯಂ ಪ್ರಾಪ್ನುಯಾದ್ಭಾಗ್ಯಂ ಮತ್ಪ್ರಸಾದೇನ ಕೇವಲಮ್ ।

ಸ್ಪೃಹೇಯಮಚಿರಾದ್ದೇವಾ ವರದಾನಾಯ ಜಾಪಿನಃ ।

ದದಾಮಿ ಸರ್ವಮಿಷ್ಟಾರ್ಥಂ ಲಕ್ಷ್ಮೀತಿ ಸ್ಮರತಾಂ ಧ್ರುವಮ್ ॥ 10 ॥


ಸನತ್ಕುಮಾರ ಉವಾಚ-

ಇತ್ಯುಕ್ತ್ವಾಽಂತರ್ದಧೇ ಲಕ್ಷ್ಮೀರ್ವೈಷ್ಣವೀ ಭಗವತ್ಕಲಾ ।

ಇಷ್ಟಾಪೂರ್ತಂ ಚ ಸುಕೃತಂ ಭಾಗಧೇಯಂ ಚ ಚಿಂತಿತಮ್ ॥ 11 ॥


ಸ್ವಂ ಸ್ವಂ ಸ್ಥಾನಂ ಚ ಭೋಗಂ ಚ ವಿಜಯಂ ಲೇಭಿರೇ ಸುರಾಃ ।

ತದೇತತ್ ಪ್ರವದಾಮ್ಯದ್ಯ ಲಕ್ಷ್ಮೀನಾಮಸಹಸ್ರಕಮ್ ।

ಯೋಗಿನಃ ಪಠತ ಕ್ಷಿಪ್ರಂ ಚಿಂತಿತಾರ್ಥಾನವಾಪ್ಸ್ಯಥ ॥ 12 ॥


ಗಾರ್ಗ್ಯ ಉವಾಚ-

ಸನತ್ಕುಮಾರೋಯೋಗೀಂದ್ರ ಇತ್ಯುಕ್ತ್ವಾ ಸ ದಯಾನಿಧಿಃ ।

ಅನುಗೃಹ್ಯ ಯಯೌ ಕ್ಷಿಪ್ರಂ ತಾಂಶ್ಚ ದ್ವಾದಶಯೋಗಿನಃ ॥ 13 ॥


ತಸ್ಮಾದೇತದ್ರಹಸ್ಯಂ ಚ ಗೋಪ್ಯಂ ಜಪ್ಯಂ ಪ್ರಯತ್ನತಃ ।

ಅಷ್ಟಮ್ಯಾಂ ಚ ಚತುರ್ದಶ್ಯಾಂ ನವಮ್ಯಾಂ ಭೃಗುವಾಸರೇ ॥ 14 ॥


ಪೌರ್ಣಮಾಸ್ಯಾಮಮಾಯಾಂ ಚ ಪರ್ವಕಾಲೇ ವಿಶೇಷತಃ ।

ಜಪೇದ್ವಾ ನಿತ್ಯಕಾರ್ಯೇಷು ಸರ್ವಾನ್ಕಾಮಾನವಾಪ್ನುಯಾತ್ ॥ 15 ॥


ಇತಿ ಶ್ರೀಸ್ಕಂದಪುರಾಣೇ ಸನತ್ಕುಮಾರಸಂಹಿತಾಯಾಂ ಲಕ್ಷ್ಮೀಸಹಸ್ರನಾಮಸ್ತೋತ್ರಂ ಸಂಪೂರ್ಣಮ್ ॥

ಆವ ರೋಗವು ಎನಗೆ ದೇವ ಧನ್ವಂತ್ರಿ !!

ಆವ ರೋಗವು ಎನಗೆ ದೇವ ಧನ್ವಂತ್ರಿ,    ಸಾಹಿತ್ಯ : ಗೋಪಾಲದಾಸರು,   ಗಾಯನ:ಶ್ರೀ ವಿದ್ಯಾಭೂಷಣ

ಆವ ರೋಗವು ಎನಗೆ ದೇವ ಧನ್ವಂತ್ರಿ ?

ಆವ ರೋಗವು ಎನಗೆ ದೇವ ಧನ್ವಂತ್ರಿ ?

ಸಾವಧಾನದಿ ಎನ್ನ ಕೈಪಿಡಿದು ನೋಡಯ್ಯ||

ಆವ ರೋಗವು ಎನಗೆ ದೇವ ಧನ್ವಂತ್ರಿ ?

+++music ++++

ಹರಿ ಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು 

ಹರಿಯ ಕೀರ್ತನೆಯು ಕೇಳಿಸದು ಕಿವಿಗೆ 

ಹರಿ ಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು 

ಹರಿಯ ಕೀರ್ತನೆಯು ಕೇಳಿಸದು ಕಿವಿಗೆ 

ಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆಗೆ 

ಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆಗೆ 

ಹರಿಪ್ರಸಾದ ಜಿಹ್ವೆಗೆ ಸವಿಯಾಗದಯ್ಯಾ..||

ಆವ ರೋಗವು ಎನಗೆ ದೇವ ಧನ್ವಂತ್ರಿ ?

+++music ++++

ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು 

ಗುರುಹಿರಿಯರಂಘ್ರಿಗೆ ಶಿರ ಬಾಗದು 

ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು 

ಗುರುಹಿರಿಯರಂಘ್ರಿಗೆ ಶಿರ ಬಾಗದು 

ಹರಿಯ ನಿರ್ಮಾಲ್ಯವಾ ಆಘ್ರಾಣಿಸದು ನಾಸಿಕ 

ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ                         

ಆವ ರೋಗವು ಎನಗೆ ದೇವ ಧನ್ವಂತ್ರಿ ?

+++music ++++

ಅನಾಥಬಂಧು ಗೋಪಾಲವಿಠಲರೇಯ 

ಅನಾಥಬಂಧು ಗೋಪಾಲವಿಠಲರೇಯ 

ಎನ್ನಭಾಗ್ಯದ ವೈದ್ಯ ನೀನೆ ಆದಿ 

ಅನಾದಿ ಕಾಲದ ಭವರೋಗ ಕಳೆಯಯ್ಯ 

ಅನಾದಿ ಕಾಲದ ಭವರೋಗ ಕಳೆಯಯ್ಯ 

ನಾನೆಂದಿಗು ಮರೆಯೆ ನೀ ಮಾಡಿದುಪಕಾರ          

ಆವ ರೋಗವೊ ಎನಗೆ ದೇವ ಧನ್ವಂತ್ರಿ ?

ಸಾವಧಾನದಿ ಎನ್ನ ಕೈಪಿಡಿದು ನೋಡಯ್ಯ||

ಆವ ರೋಗವು ಎನಗೆ ದೇವ ಧನ್ವಂತ್ರಿ ?

ಆವ ರೋಗವು ಎನಗೆ ದೇವ ಧನ್ವಂತ್ರಿ ?

++++ ಧನ್ಯವಾದಗಳು ++++


ಜಯ ಜನಾರ್ಧನ ಕೃಷ್ಣ ರಾಧಿಕಾಪತೇ: Gouthami S Moorthy

 ಜಯ ಜನಾರ್ಧನ ಕೃಷ್ಣ ರಾಧಿಕಾಪತೇ

ಜನ ವಿಮೋಚನ ಕೃಷ್ಣ ಜನ್ಮ ಮೋಚನ

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ

ಜನ ವಿಮೋಚನ ಕೃಷ್ಣ ಜನ್ಮ ಮೋಚನ

ಗರುಡ ವಾಹನ ಕೃಷ್ಣ ಗೋಪಿಕಾ ಪತೇ

ನಯನ ಮೋಹನ ಕೃಷ್ಣ ನೀರಜೇಕ್ಷಣ॥ಪ॥

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ

ಜನ ವಿಮೋಚನ ಕೃಷ್ಣ ಜನ್ಮ ಮೋಚನ ||

++MUSIC ++

ಸುಜನ ಬಾಂಧವ ಕೃಷ್ಣ ಸುಂದರ ಕೃತೆ

ಮದನ ಕೋಮಲ ಕೃಷ್ಣ ಮಾಧವ ಹರೇ

ವಸುಮತಿ ಪತೇ ಕೃಷ್ಣ ವಾಸವಾನುಜ

ವರಗುಣಾಕರ ಕೃಷ್ಣ ವೈಷ್ಣವಾಕೃತೆ 

ಸುರಚಿರಾನನ ಕೃಷ್ಣ ಶೌರ್ಯವಾರಿಧೆ

ಮುರಹರ ವಿಭೋ ಕೃಷ್ಣ ಮುಕ್ತಿದಾಯಕ

ವಿಮಲಪಾಲಕ ಕೃಷ್ಣ ವಲ್ಲಭೀಪತೆ

ಕಮಲಲೋಚನಾ ಕೃಷ್ಣ ಕಾಮ್ಯದಾಯಕ॥೧॥ 

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ

ಜನ ವಿಮೋಚನ ಕೃಷ್ಣ ಜನ್ಮ ಮೋಚನ

++MUSIC ++

ವಿಮಲಗಾತ್ರನೇ ಕೃಷ್ಣ ಭಕ್ತವತ್ಸಲ

ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್

ಕುವಲೈಈಕ್ಷಣ ಕೃಷ್ಣ ಕೋಮಲಾಕೃತೆ

ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ

ಭುವನ ನಾಯಕ ಕೃಷ್ಣ ಪಾವನಾಕೃತೆ

ಗುಣಗಣೋಜ್ವಲಾ ಕೃಷ್ಣ ನಳಿನಲೋಚನ

ಪ್ರಣಯವಾರಿಧೆ ಕೃಷ್ಣ ಗುಣಗಣಾಕರ

ದಾಮಸೋದರ ಕೃಷ್ಣ ದೀನ ವತ್ಸಲ ॥೨॥

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ

ಜನ ವಿಮೋಚನ ಕೃಷ್ಣ ಜನ್ಮ ಮೋಚನ

++MUSIC ++

ಕಾಮಸುಂದರ ಕೃಷ್ಣ ಪಾಹಿ ಸರ್ವದಾ

ನರಕನಾಶನ ಕೃಷ್ಣ ನರಸಹಾಯಕ

ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ

ಕಂಸನಾಶನ ಕೃಷ್ಣ ದ್ವಾರಕಾಸ್ಥಿತ

ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ

ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್

ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ

ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ॥೩॥

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ

ಜನ ವಿಮೋಚನ ಕೃಷ್ಣ ಜನ್ಮ ಮೋಚನ

++MUSIC ++

ಭಕ್ತದಾಸ ನಾ ಕೃಷ್ಣ ಹರಸು ನೀ ಸದಾ

ಕಾದು ನಿಂತೇನಾ ಕೃಷ್ಣ ಸಲಹೆಯಾ ವಿಭೋ

ಗರುಡ ವಾಹನ ಕೃಷ್ಣ ಗೋಪಿಕಾ ಪತೇ

ನಯನ ಮೋಹನ ಕೃಷ್ಣ ನೀರಜೇಕ್ಷಣ ॥೪॥

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ

ಜನ ವಿಮೋಚನ ಕೃಷ್ಣ ಜನ್ಮ ಮೋಚನ

ಗರುಡ ವಾಹನ ಕೃಷ್ಣ ಗೋಪಿಕಾ ಪತೇ

ನಯನ ಮೋಹನ ಕೃಷ್ಣ ನೀರಜೇಕ್ಷಣ॥

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ

ಜನ ವಿಮೋಚನ ಕೃಷ್ಣ ಜನ್ಮ ಮೋಚನ

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ

ಜನ ವಿಮೋಚನ ಕೃಷ್ಣ ಜನ್ಮ ಮೋಚನ

+++ ಧನ್ಯವಾದಗಳು +++

Thursday, April 1, 2021

ಐದು ಕಾಲಿನ ಮಂಚ

 ಐದು ಕಾಲಿನ ಮಂಚ 

"ಐದು ಕಾಲಿನ ಮಂಚ ಕುಂಟ ಮಲಗಿದ್ದ" ಹತ್ತಾರು ರೀತಿಯಲ್ಲಿ ಅರ್ಥೈಸಿ

ಸಾಂದರ್ಭಿಕ ಚಿತ್ರ


ಕೊಳ್ಳಬಹುದಾದ ಅದ್ಭುತ ಪದ್ಯದ ರಚನೆಯನ್ನು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಮಾಡಿದ್ದು, ಈ ಪದ್ಯದ ಒಂದೊಂದು ಸಾಲಿಗೂ ಅರ್ಥವತ್ತಾದ ವಿವರಣೆಯನ್ನು ನೀಡಿದ್ದಾರೆ ಶ್ರೀನಾಥ್ ಭಲ್ಲೆ.



ಇತ್ತೀಚೆಗೆ ನಮ್ಮನ್ನು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಅಗಲಿದರು. ವೇದೋಪನಿಷದ್ ಮತ್ತು ಪುರಾಣಗಳನ್ನು ಸಾಕಷ್ಟು ಅರ್ಥೈಸಿಕೊಂಡಿದ್ದೇ ಅಲ್ಲದೇ ಅದನ್ನು ಪ್ರಚಾರ ಕೂಡ ಮಾಡುತ್ತಲೇ ನಮ್ಮೊಂದಿಗೆ ಇದ್ದವರು, ಇಂದು ನಮ್ಮನ್ನು ಅಗಲಿದ್ದಾರೆ. ಇನ್ನೊಂದರ್ಥದಲ್ಲಿ ಹೇಳುವುದಾದರೆ ದೈಹಿಕವಾಗಿ ಮಾತ್ರ ನಮ್ಮನ್ನು ಅಗಲಿದ್ದಾರೆ ಆದರೆ ಅವರ ಉಪದೇಶಾಮೃತ ನಮ್ಮೊಂದಿಗೇ ಸದಾ ಇರುತ್ತದೆ.


ಅವರು ಅಗಲಿದ ದಿನದಂದೇ, ಅವರು ರಚಿಸಿರುವ ಒಂದು ಅದ್ಭುತವಾದ ರಚನೆಯನ್ನು ಶ್ರೀ. ವಿದ್ಯಾಭೂಷಣರ ದನಿಯಲ್ಲಿ ಮತ್ತೆ ಕೇಳುವ ಯೋಗ ಒದಗಿ ಬಂತು. ಈ ಬಾರಿ ಕೇಳುವಾಗ ಅರ್ಥೈಸಿಕೊಳ್ಳುವ ಇರಾದೆಯೂ ಉಂಟಾಯಿತು. ಈ ಒಂದು ಕ್ರಿಯೆಯಲ್ಲಿ ನನಗೆ ಅರ್ಥವಾಗಿದ್ದು ಏನೆಂದರೆ, ಒಂದೊಂದೂ ಸಾಲನ್ನು ಹತ್ತು ಹಲವು ರೀತಿ ಅರ್ಥೈಸಿಕೊಳ್ಳಬಹುದು ಎಂದು. ಆದರೆ ಆಚಾರ್ಯರು ಇದನ್ನು ಯಾವ ಆಲೋಚನೆಯಿಂದ ರಚಿಸಿದ್ದಾರೆ ಎಂಬುದರ ಅರಿವು ನನಗಿಲ್ಲ.


ಸಾಹಿತ್ಯ ಹೀಗಿದೆ

ಐದು ಕಾಲಿನ ಮಂಚ ಕುಂಟ ಮಲಗಿದ್ದಾ,

ಮೂರು ದಂಟೆಗಳನ್ನು ಬಗಲಿಗಿಳಿಸಿದ್ದಾ

ಇದ್ದೈದು ಕಾಲಿಗೂ ಕೈಕಾಲು ಬಂತು,

ಕುಂಟ ಮಲಗಿದ್ದಂತೆ ಮಂಚ ಧಾವಿಸಿತು

ಆರು ಜನ ದಾಂಡಿಗರು ಕೈಹಿಡಿದರೆಳೆದು,

ಜಾರಿ ಬಿದ್ದನೊ ಕುಂಟ ಪಕ್ಕೆಲುಬು ಮುರಿದು

ಏಳೈಯ್ಯ ಕುಂಟೈಯ್ಯ ದಂಟೆಹಿಡಿದೇಳು,

ಕೋಳಿ ಹಾಡುವ ಸುಪ್ರಭಾತವನು ಕೇಳು

ಈ ಐದು ಈ ಆರು ಈ ಮೂರು ಸಾಕು,

ಹದಿನೆಂಟು ಬೇಕೋ ಬಿಡಬೇಕು ಹದಿನಾಲ್ಕು.


ಈಗ ಒಂದೊಂದೂ ಸಾಲನ್ನು ನೋಡೋಣ ಬನ್ನಿ

ಐದು ಕಾಲಿನ ಮಂಚ ಕುಂಟ ಮಲಗಿದ್ದಾ

ಇಲ್ಲಿ ಮಂಚ ಎಂದರೆ ದೇಹ. ಪಂಚಭೂತಗಳನ್ನು ಹೊಂದಿರುವ ದೇಹ. ಪಂಚಭೂತಗಳನ್ನೇ ಕಾಲುಗಳನ್ನಾಗಿ ಉಳ್ಳ ದೇಹವೆಂಬ ಮಂಚ. ಅದರ ಮೇಲೆ ಒಬ್ಬ ಕುಂಟ ಮಲಗಿದ್ದ. ಇಲ್ಲಿ ಕುಂಟ ಎಂದರೆ ನಡೆಯಲಾರದವ ಅಂತಷ್ಟೇ. ಕಾಲು ಊನ ಆಗಿರಬೇಕು ಅಂತೇನಲ್ಲ. ಹೆಳವ ಎಂಬ ಅರ್ಥವಲ್ಲ. ಬದಲಿಗೆ ಕೂತಲ್ಲೇ ಕೂತಿರುವವ, ಮಲಗಿದ್ದಲ್ಲೇ ಮಲಗಿರುವವ ಅರ್ಥಾತ್ ಸೋಂಬೇರಿ.


ಒಡಹುಟ್ಟಿದವರೇ ದೋಸ್ತಿಗಳು.. ಬಸ್‌ ಏರಿ ಶಾಲೆಗೆ ಹೋಗಿ ಬರ್ತಿದ್ದ ಆ ದಿನಗಳನ್ನು ನೆನಪಿಸಿಕೊಳ್ಳಿ..!


ಮೂರು ದಂಟೆಗಳನ್ನು ಬಗಲಿಗಿಳಿಸಿದ್ದಾ

ವಿಶೇಷಾರ್ಥದಲ್ಲಿ ಮೂರು ದಂಟೆಗಳು ಎಂದರೆ ಜ್ಞಾನ, ಭಕ್ತಿ, ವೈರಾಗ್ಯ. ಈ ಮೂರನ್ನು ಬದಿಗೆ ಇರಿಸಿ ಆ ಕುಂಟ ಮಲಗಿದ್ದ ಎಂದರೆ ಈ ಮೂರರ ಬಗ್ಗೆ ಲಕ್ಷ್ಯವೇ ತೋರದೆ, ಆಸಕ್ತಿಯನ್ನೇ ಹೊಂದದೇ ತನ್ನಷ್ಟಕ್ಕೆ ತಾನು ಮಲಗಿದ್ದ. ಜ್ಞಾನ, ಭಕ್ತಿ, ವೈರಾಗ್ಯಗಳ ಬಗ್ಗೆ ಅರಿವಿಲ್ಲದೆ ಮಲಗಿರಬಹುದು ಅಥವಾ ಇದೆಲ್ಲಾ ತನಗಲ್ಲ ಎಂದು ಮಲಗಿರಬಹುದು. ಕೆಲವೊಮ್ಮೆ ನಮ್ಮಲ್ಲೇ ಜನ ಹೇಳುತ್ತಾರೆ ನೋಡಿ, "ಓ ಭಗವದ್ಗೀತೆ’ಯಾ? ಅದು ಬರೀ ವಯಸ್ಸಾದವರಿಗೆ" ಅಂತ, ಹಾಗೆ.


ಸಾಮಾನ್ಯವಾದ ಅರ್ಥದಲ್ಲಿ ಮೂರು ದಂಟೆಗಳನ್ನು ನಾಚಿಕೆ, ಮಾನ, ಮರ್ಯಾದೆ ಎನ್ನಬಹುದು. ಕೆಲವೊಮ್ಮೆ ಎಂಥಾ ಜಡ ಆಲಸ್ಯ ಎಂದರೆ ಉಂಡು ಮಲಗೋದು ಬಿಟ್ಟರೆ ಬೇರೊಂದು ಕೆಲಸ ಗೊತ್ತಿಲ್ಲ ಎಂಬಂತೆ. ಯಾರೇ ಅನ್ನಲಿ, ಕೂಗಾಡಲಿ ಊರೇ ಹೋರಾಡಲಿ ಇವರ ನೆಮ್ಮದಿಗೆ ಭಂಗವಿಲ್ಲ ಎಂಬಂತೆ ಜೀವನ.


ಇದ್ದೈದು ಕಾಲಿಗೂ ಕೈಕಾಲು ಬಂತು,

ಇಲ್ಲಿನ ಐದು ಎಂದರೆ ಪಂಚೇಂದ್ರಿಯಗಳು ಅಂತರ್ಥ. ಎಲ್ಲ ಐದಕ್ಕೂ ಕೈಕಾಲು ಬಂತು ಎಂದರೆ ಆಚೀಚೆ ಹೋಗುವ ಅಥವಾ ನೋಡುವ ಒಂದು ಬುದ್ದಿ. ಅದು ಬೇಕು, ಇದು ಬೇಕು, ತಾನು ,ತನ್ನದು ಎಂಬೆಲ್ಲಾ ಭಾವಗಳು. ನಡೆದಾಡುವ ದೇಹಕ್ಕೆ ಮಾತ್ರ ಬಯಕೆಗಳು ಅಲ್ಲ ತಾನೇ? ಸುಮ್ಮನೆ ಬಿದ್ದುಕೊಂಡಿರುವ ದೇಹಕ್ಕೂ ಬಯಕೆಗಳು ಇದ್ದೇ ಇರುತ್ತವೆ.


ಕುಂಟ ಮಲಗಿದ್ದಂತೆ ಮಂಚ ಧಾವಿಸಿತು

ಅಂಥಾ ಬಯಕೆಗಳನ್ನು ಹೊತ್ತ ದೇಹ ಧಾವಿಸಿತು. ಬಯಕೆಗಳತ್ತ ಪಯಣ ಬೆಳೆಸಿದವು ಎಂದು ಅರ್ಥೈಸಿಕೊಳ್ಳಬಹುದು. ಅಥವಾ ಇಂಥಾ ಬಯಕೆಗಳಲ್ಲೇ ಯಾನ ಮಾಡುತ್ತಾ ದೇಹ ವಯಸ್ಸಿನೊಂದಿಗೆ ಮುಂದೆ ಮುಂದೆ ಸಾಗುತ್ತಿತ್ತು ಎನ್ನಬಹುದು.


ಕಚಗುಳಿ ಇಡುವಂಥ ನೆನಪುಗಳನ್ನು ತರುವ ಶಾಲೆಯ ದಿನಗಳು..! ನಿಮಗೆ ನೆನಪಿವೆಯೆ?


ಆರು ಜನ ದಾಂಡಿಗರು ಕೈಹಿಡಿದರೆಳೆದು

ಬಯಕೆಗಳತ್ತ ಮೊಗತೋರಿ ತೋರಿ ಧಾವಿಸುತ್ತಿರಲು ಅರಿಷಡ್ವರ್ಗಗಳೂ ಕೂಡಿಕೊಂಡು ಆರುದಿಕ್ಕಿನಲ್ಲಿ ಎಳೆದಾಡ ತೊಡಗಿತ್ತು. ಯಾವಾಗ ಬಯಕೆಗಳು ಎಂಬುದು ಆವರಿಸುತ್ತದೋ ಅಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಮದ. ಮತ್ಸರ, ಲೋಭ, ಮೋಹಗಳಿಗೆ ಮನೆಯನ್ನೇ ಕಟ್ಟಿದಂತೆ. ಈ ಆರರಲ್ಲಿ ಒಬ್ಬರು ಕೈಹಿಡಿದು ತಮ್ಮತ್ತ ಸೆಳೆದರೂ ವಿನಾಶವೇ ಎಂದಾಗ, ಆರೂ ಜನ ಕೈಹಿಡಿದು ತಮ್ಮತ್ತ ಸೆಳೆದುಕೊಳ್ಳತೊಡಗಿದರು ಎಂದರೆ ಆ ದೇಹ ಹೈರಾಣವೇ ಸರಿ.


ಜಾರಿ ಬಿದ್ದನೊ ಕುಂಟ ಪಕ್ಕೆಲುಬು ಮುರಿದು

ಇಷ್ಟೆಲ್ಲಾ ಆದಾಗ, ಒಂದು ದೇಹ ಇನ್ನೆಷ್ಟೇ ಮೇಲಿದ್ದರೂ ಕೆಳಕ್ಕೆ ಉರುಳಿ ಪಕ್ಕೆಲುಬು ಮುರಿದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಒಬ್ಬರ ಅವನತಿಗೆ ಒಂದು 'ಅರಿ' (ಶತ್ರು) ಸಾಕು, ಆರೂ ಜನ ಬೇಕಿಲ್ಲ. ಅರಿಯನ್ನು ಅರಿತು ಎಚ್ಚರಿಕೆಯಿಂದ ಮುನ್ನೆಡೆವವ ಬಾಳುತ್ತಾನೆ.

ಕನ್ನಡ ಭಾಷೆಯ ಸೊಗಸೇ ಸೊಗಸು - ಭಾಗ 2: ವ್ಯಾಕರಣದಲ್ಲಿ ಅಡಗಿದೆ ಗಣಿತ, ವಿಜ್ಞಾನ..!


ಏಳೈಯ್ಯ ಕುಂಟೈಯ್ಯ ದಂಟೆಹಿಡಿದೇಳು

ಈಗ ಬಿದ್ದಾಯಿತಲ್ಲಾ, ಈಗಲಾದರೂ ಎಚ್ಚೆತ್ತುಕೊಂಡು ಎದ್ದು ನಿಲ್ಲು. ಅರಿವನ್ನು ಮೂಡಿಸಿಕೊಂಡು ಮೂರು ಗಂಟೆಗಳನ್ನು ಹಿಡಿ. ಕನಿಷ್ಠ ಎಂದರೆ ನಾಚಿಕೆ, ಮಾನ, ಮರ್ಯಾದೆ ಹೊಂದುವವನಾಗು. ಅಲ್ಲಿಂದ ಪೂರ್ಣವಾಗಿ ಎಚ್ಚರಗೊಂಡು ಜ್ಞಾನ, ಭಕ್ತಿ, ವೈರಾಗ್ಯದತ್ತ ಸಾಗು. ಅಹೋರಾತ್ರಿಯಲಿ ವೈರಾಗ್ಯ ತಾಳಿ ದೈವದತ್ತ ನಡೆಯಲು ನಾವೇನು ಬುದ್ದನೇ? ಅಥವಾ ದಾಸರೇ? ಅದು ಅಷ್ಟು ಸುಲಭ ಸಾಧ್ಯವಲ್ಲ.


ಕೋಳಿ ಹಾಡುವ ಸುಪ್ರಭಾತವನು ಕೇಳು

ಎಚ್ಚೆತ್ತುಕೊಂಡವನಿಗೆ ಹಗಲು ಎಂದರೇನು, ಕೋಳಿ ಎಂದರೇನು, ಕೋಳಿ ಕೂಗುವುದು ಎಂದರೇನು ಎಂಬ ಅರಿವು ಇರುತ್ತದೆ. ಬಿಸಿಲು ನೆತ್ತಿಗೇರಿದಾಗ ಎದ್ದವಗೆ ಇದರ ಅರಿವು ಇರುವುದಿಲ್ಲ. ಒಂದರ್ಥದಲ್ಲಿ ಕೋಳಿ ಎಂಬುದು ಆರಂಭದ ಸಂಕೇತ. ಬಾಳಲ್ಲಿ ಬೆಳಕು ಮೂಡಿಸಿಕೊಂಡು, ಜ್ಞಾನಜ್ಯೋತಿಯ ಬೆಳಗಿಸಿಕೊಂಡು, ಅರಿವಿನ ದೀಪ ಉರಿಸಿಕೊಂಡು ದಿನವನ್ನು ಆರಂಭಿಸು ಎನ್ನುವುದಾಗಿಯೂ ಅರ್ಥೈಸಿಕೊಳ್ಳಬಹುದು.



ಈ ಐದು ಈ ಆರು ಈ ಮೂರು ಸಾಕು

ಇಲ್ಲಿ ಸಾಕು ಎಂಬುದನ್ನು ಎರಡು ರೀತಿ ಅರ್ಥೈಸಿಕೊಳ್ಳಬಹುದು. ಒಂದು 'ಸಾಕು' ಎಂದರೆ ಸಾಕಪ್ಪಾ ಇದರ ಸಹವಾಸ ಅಂತ. ಹಾಗಿದ್ದಾಗ ಈ ಐದು, ಆರು, ಮೂರು ಎಂದರೇನು? ಮತ್ತೊಂದು ಅರ್ಥದಲ್ಲಿ ಹೇಳಿದರೆ 'ಸಾಕು' ಎಂದರೆ ಇಷ್ಟು 'ಸಾಕು' ಇನ್ನೇನೂ ಬೇಡಾ ಅಂತ. ಹಾಗಿದ್ದಾಗ ಈ ಐದು, ಆರು, ಮೂರು ಎಂದರೇನು? ಪಂಚಭೂತಗಳು ನಮ್ಮೊಂದಿಗಿರಲು, ಸ್ನೇಹಮಯಿ ಷಡ್ವರ್ಗಗಳು ನಮ್ಮೊಂದಿಗಿರಲು, ಜ್ಞಾನ, ವೈರಾಗ್ಯ, ಭಕ್ತಿಗಳೆಂಬ ದಂಟೆಗಳನ್ನು ಬದಿಗಿರಿಸದೆ ಕೈಲಿ ಪಿಡಿಯಲು ಸಾಧಿಸಬಹುದು ಹದಿನೆಂಟು, ಆದರೆ ಬಿಡಬೇಕು ಹದಿನಾಲ್ಕು. ಆರು ಎಂದರೆ ಪಂಚೇಂದ್ರಿಯಗಳು ಐದು ಜೊತೆಗೆ ಮೆದುಳು ಎಂಬುದೇ ಸ್ನೇಹಮಯಿ ಷಡ್ವರ್ಗಗಳು.

Perception ಎಂದರೆ ಗ್ರಹಿಕೆ ಅಷ್ಟೇ ನಿಜವೇ ಆಗಿರಬೇಕಿಲ್ಲ: ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು!


ಹದಿನೆಂಟು ಬೇಕೋ ಬಿಡಬೇಕು ಹದಿನಾಲ್ಕು

ಆರಕ್ಕೆ ಎಂಟು ಸೇರಿಸಿದಾಗ ಹದಿನಾಲ್ಕು ಆಗುತ್ತದೆ. ಆರು ಎಂದರೆ ಅರಿಷಡ್ವರ್ಗಗಳು. ಇದಕ್ಕೆ ಎಂಟು ಮದಗಳನ್ನು ಸೇರಿಸಿದರೆ?

ರೂಪ, ಯೌವ್ವನ, ಅಧಿಕಾರ ಇತ್ಯಾದಿ ಅಷ್ಟ ಮದಗಳನ್ನು ಸೇರಿದ ಹದಿನಾಲ್ಕನ್ನು ಬಿಡಬೇಕು ಆಗಲೇ ಸಿಗುವುದು ಹದಿನೆಂಟು. ಈ ಹದಿನೆಂಟು ಎಂದರೆ ಹದಿನೆಂಟು ಅಧ್ಯಾಯಗಳ ಭಗವದ್ಗೀತೆ. ಹದಿನೆಂಟು ಎಂದರೆ ಜಯ ಅರ್ಥಾತ್ ಹದಿನೆಂಟು ಪರ್ವಗಳ ಜಯ ಅಥವಾ ಮಹಾಭಾರತ. ಇಂಥಾ ಪವಿತ್ರವಾದ ಹದಿನೆಂಟನ್ನು ಸಾಧಿಸಲು ಹದಿನಾಲ್ಕನ್ನು ಬಿಡಲೇಬೇಕು.

ಐದು ಕಾಲಿನ ಮಂಚ ಕುಂಟ ಮಲಗಿದ್ದ; ಬನ್ನಂಜೆಯವರ ಅಪರೂಪದ ಪದ್ಯವಿದು..!

ನನಗಿರುವ ಜ್ಞಾನದಿಂದ ಈ ಒಂದು ಯತ್ನ ನಡೆಸಿದ್ದೇನೆ. ತಪ್ಪಿದ್ದರೆ ಕ್ಷಮಿಸಿ.


 ಶ್ರೀನಾಥ್ ಭಲ್ಲೆ 

Related Posts Plugin for WordPress, Blogger...
Related Posts Plugin for WordPress, Blogger...

Search More....

2014-2015-2016